Advertisement

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

12:53 AM Sep 20, 2024 | Team Udayavani |

ಕಾರವಾರ: ನೌಕಾನೆಲೆ ವ್ಯಾಪ್ತಿಯಲ್ಲಿ ಅರಗಾ ಸಮೀಪ ಮೀನುಗಾರಿಕೆ ಮಾಡುತ್ತಿದ್ದಾರೆ ಎಂದು ಮೀನು ಹಿಡಿಯಲು ಹಾಕಿದ್ದ ಬಲೆಯನ್ನು ಅಧಿಕಾರಿಗಳು ಕತ್ತರಿಸಿದ ಘಟನೆ ಬುಧವಾರ ನಡೆದಿದೆ.

Advertisement

ಮುದಗಾದಿಂದ ಹೊರಟ ವೀರಗಣಪತಿ ಎಂಬ ಹೆಸರಿನ ಬೋಟ್‌ ಸಮುದ್ರದಲ್ಲಿ ಮೀನುಗಾರಿಕೆಗೆ ಬಲೆ ಬೀಸಿತ್ತು. ನೌಕಾನೆಲೆ ವ್ಯಾಪ್ತಿಯ ಮೂರು ನಾಟಿಕಲ್‌ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ನಿಷೇಧ ಇದ್ದು, ಇದೇ ನೆಪದಲ್ಲಿ ದಾಮೋದರ ತಾಂಡೇಲ್‌ ಅವರಿಗೆ ಸೇರಿದ ಮೀನಿನ ಬಲೆಯನ್ನು ನೌಕಾದಳದ ಅಧಿಕಾರಿಗಳು ಕತ್ತರಿಸಿ ಹಾಕಿದ್ದಾರೆ.

ನೌಕಾಪಡೆಯ ಈ ವರ್ತನೆಯಿಂದಾಗಿ ಲಕ್ಷಾಂತರ ರೂ. ಬೆಲೆಯ ಬಲೆ ನಾಶವಾಗಿದೆ ಎಂದು ಮೀನುಗಾರರು ದೂರಿದ್ದಾರೆ. ಆದರೆ ನೌಕಾಪಡೆ ಅಧಿಕಾರಿಗಳು ನೌಕಾನೆಲೆಯ ನಿರ್ಬಂಧಿತ ಪ್ರದೇಶದಲ್ಲಿ ಮೀನುಗಾರಿಕೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ನೌಕಾನೆಲೆ ವ್ಯಾಪ್ತಿಯಲ್ಲಿ ಮೀನುಗಾರರು ಮತ್ತು ಕದಂಬ ನೌಕಾನೆಲೆ ಸಿಬಂದಿ ನಡುವೆ ಗಡಿರೇಖೆ ವಿವಾದ ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next