Advertisement

ಅಂಜಾರುಕಟ್ಟೆ: ಉರುಳಿಗೆ ಸಿಲುಕಿದ ಚಿರತೆಯ ರಕ್ಷಣೆ

06:30 AM Jul 20, 2017 | Team Udayavani |

ಉಡುಪಿ: ಮಣಿಪುರ ಗ್ರಾಮದ ಅಂಜಾರುಕಟ್ಟೆಯ ಅದಮಾರು ಮಠದ ಹಾಡಿಯಲ್ಲಿ. ಬುಧವಾರ ಮಧ್ಯಾಹ್ನ ಉರುಳಿಗೆ ಸಿಲುಕಿದ ಚಿರತೆಯೊಂದು ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿಯಂತೆ ಉಡುಪಿ ಅರಣ್ಯ ಇಲಾಖೆ ಅಧಿಕಾರಿ, ಸಿಬಂದಿ ಸ್ಥಳಕ್ಕೆ ಧಾವಿಸಿ ಚಿರತೆಯನ್ನು ರಕ್ಷಣೆ ಮಾಡಿ ಬೋನಿಗೆ ಹಾಕಿ ಸುರಕ್ಷಿತವಾಗಿ ಕೊಂಡೊಯ್ದಿದ್ದಾರೆ.

Advertisement

ಸುಮಾರು ಮೂರ್‍ನಾಲ್ಕು ವರ್ಷ ಪ್ರಾಯದ ಗಂಡು ಚಿರತೆಯಾಗಿದ್ದು, ಉರುಳು ಹಾಕಿದ್ದ ವಯರ್‌ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿತ್ತು. ಅದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇಲಾಖೆಯ
ವರು ಚಿರತೆಯನ್ನು ರಕ್ಷಿಸಿ ಬೋನಿಗೆ ಹಾಕಿ ತೆಗೆದುಕೊಂಡು ಹೋಗಿದ್ದಾರೆ. ಸ್ವಲ್ಪ ಗಾಯಗೊಂಡಿರುವ ಚಿರತೆಯನ್ನು ಇಲಾಖೆಯವರು ಆದಿವುಡುಪಿಯ ಕಚೇರಿಯಲ್ಲಿ ಇರಿಸಿಕೊಂಡಿದ್ದಾರೆ. ಅಲ್ಲಿಂದ ಚಿಕಿತ್ಸೆಗೆ ಪಿಳಿಕುಳಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next