Advertisement

ಆಸ್ಕರ್‌ ಆರೋಗ್ಯ ವಿಚಾರಿಸಿದ  ಎಂಆರ್‌ಸಿಸಿ ಅಧ್ಯಕ್ಷ ಭಾಯ್‌ ಜಗ್ತಾಪ್‌

01:11 PM Jul 26, 2021 | Team Udayavani |

ಮುಂಬಯಿ,: ಮುಂಬಯಿ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಎಂಆರ್‌ಸಿಸಿ) ಅಧ್ಯಕ್ಷ, ಶಾಸಕ, ಎಂಎಲ್‌ಸಿಭಾಯ್‌ ಜಗ್ತಾಪ್‌ ಅಶರು ಶುಕ್ರವಾರ ಮಂಗಳೂರಿಗೆ ತೆರಳಿ ಆಸ್ಕರ್‌ ಫೆರ್ನಾಂಡಿಸ್‌ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು.

Advertisement

ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ, ಅಖೀಲ ಭಾರತೀಯ ಕಾಂಗ್ರೆಸ್‌ (ಐ) ಪಕ್ಷದ ಸಕ್ರಿಯ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಮಂಗಳೂರಿನ ಯೇನಪೊಯಾ ಆಸ್ಪತೆಗೆ ದಾಖಲಾಗಿದ್ದು, ಅವರನ್ನು ಖುದ್ದಾಗಿ ಕಾಣಲು ಮಂಗಳೂರಿಗೆ ಭೇಟಿ ನೀಡಿದ ಭಾಯ್‌ ಜಗ್ತಾಪ್‌ ಅವರನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್‌ ಸಮಿತಿಯ ಸದಸ್ಯ ಡಾ| ರಾಜಶೇಖರ್‌ ಕೋಟ್ಯಾನ್‌ ಸ್ವಾಗತಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾ ಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಆಸ್ಪತ್ರೆಗೆ ಭೇಟಿ ನೀಡಿ ಆಸ್ಕರ್‌ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಕಾಂಗ್ರೆಸ್‌ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ಕುಮಾರ್‌, ಮಾಜಿ ಶಾಸಕ ಬಿ. ಎ. ಮೊಯ್ದಿàನ್‌ ಬಾವ, ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ, ನವೀನ್‌ ಡಿ’ಸೋಜಾ, ರಾಜೇಶ್‌ ಕೋಟ್ಯಾನ್‌ ಬಾಂದ್ರಾ ಮತ್ತಿತರರಿದ್ದರು.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರೂ ಆಗಿರುವ ಡಾ| ರಾಜಶೇಖರ್‌ ಕೋಟ್ಯಾನ್‌ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ನಿಶ್ಚಿತವಾಗಿದ್ದು, ಬಿಲ್ಲವ (ಈಡಿಗ) ಸಮುದಾಯದ ದಕ್ಷ ನಾಯಕ, ಪ್ರಾಮಾಣಿಕ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ರಾಜ್ಯದ ಭಾವಿ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಮಹಾ ಮಂಡಲದ ಪರವಾಗಿ ಆಡಳಿತಾರೂಢ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಧುರೀಣರಲ್ಲಿ ವಿನಂತಿಸುತ್ತಿದ್ದೇವೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next