Advertisement

ಮೀರಾ-ಭಾಯಂದರ್‌ ಮನಪಾಗೆ ನಷ್ಟ

12:40 PM Jul 10, 2021 | Team Udayavani |

ಭಾಯಂದರ್: ಮೀರಾ- ಭಾಯಂದರ್‌ ನಗರದಲ್ಲಿ ನಿರಂತರ ಲಸಿಕೆಗಳ ಕೊರತೆಯನ್ನು ನೀಗಿಸುವ ಸಲುವಾಗಿ ಮನಪಾ ಆಡಳಿತವು ಜಾಗತಿಕ ಟೆಂಡರ್‌ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಆದರೆ ಈ ಟೆಂಡರ್‌ ಪ್ರಕ್ರಿಯೆಗೆ ಸರಿಯಾದ ಪ್ರತಿಕ್ರಿಯೆ ಸಿಗದ ಕಾರಣ ನಿಗಮವು 25 ಲಕ್ಷ ರೂ. ಗಳ ಆರ್ಥಿಕ ನಷ್ಟವನ್ನು ಭರಿಸಬೇಕಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಮೀರಾ-ಭಾಯಂದರ್‌ ನಗರವು ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕನ್ನು ಎದುರಿಸುತ್ತಿದೆ. ಎರಡನೇ ಅಲೆ ತೀವ್ರವಾಗಿ ಬಾಧಿಸಿದ್ದು,  ಕೊರೊನಾ ವ್ಯಾಪಿಸದಂತೆ ಮನಪಾದಿಂದ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇನ್ನೂ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಹೆಚ್ಚು ಹೆಚ್ಚು ನಾಗರಿಕರಿಗೆ ವ್ಯಾಕ್ಸಿನೇಶನ್‌ ಪೂರ್ಣಗೊಳಿಸಲು ಆಡಳಿತವು ಹೆಚ್ಚು ಹೆಚ್ಚು ಒತ್ತು ನೀಡುತ್ತಿದೆ. ಆದರೆ ಲಸಿಕೆಗಳ ಕೊರತೆಯಿಂದಾಗಿ ಆಡಳಿತವು ಲಸಿಕೆ ಕೇಂದ್ರಗಳನ್ನು ಮುಚ್ಚುವ ಸ್ಥಿತಿಯಿದೆ. ಶಾಶ್ವತ ಪರಿಹಾರವಾಗಿ ಮುಂಬಯಿಯಂತೆ ಮೀರಾ-ಭಾಯಂದರ್‌ ಮನಪಾ ಆಡಳಿತವು ನಾಲ್ಕು ಲಕ್ಷ ಲಸಿಕೆಗಳನ್ನು ಸಂಗ್ರಹಕ್ಕೆ ಜಾಗತಿಕ ಟೆಂಡರ್‌  ಪ್ರಕ್ರಿಯೆಗೆ  ನಿರ್ಧರಿಸಿತು.

ಈ ಜಾಹೀರಾತನ್ನು ನ್ಯೂಯಾರ್ಕ್‌ ಟೈಮ್ಸ… ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ 25 ಲಕ್ಷ ರೂ. ಗಳು ವೆಚ್ಚವಾಗಿದ್ದು, ಟೆಂಡರ್‌ ಪ್ರಕ್ರಿಯೆಯನ್ನು ಎರಡು ಬಾರಿ ವಿಸ್ತರಿಸಿದ ಬಳಿಕವೂ ಸರಿಯಾದ ಪ್ರತಿಕ್ರಿಯೆ ಸಿಗದ ಕಾರಣ ಮನಪಾ ನಿರಾಶೆಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next