Advertisement

ಪ್ರಾಣಿ ಪಕ್ಷಿಗಳ ಕ್ಷೇಮ ಚಿಂತನ ವಾಹನ ಲೋಕಾರ್ಪಣೆ 

10:42 AM Jan 26, 2018 | Team Udayavani |

ಪಣಂಬೂರು: ಪ್ರಾಣಿ ಪಕ್ಷಗಳ ಮತ್ತು ಮನುಷ್ಯರ ರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಶಂಕರಪುರದ ಶ್ರೀ ಸಾಯಿ ಸಾಂತ್ವನ ಮಂದಿರದ ಗುರೂಜಿ ಸಾಯಿ ಈಶ್ವರ್‌ ಹೇಳಿದರು.

Advertisement

ಅವರು ಶ್ರೀ ಸಾಯಿ ಸಾಂತ್ವಾನ ಮಂದಿರ ಶಂಕರಪುರ ಮತ್ತು ಸ್ಕಂದ ಡೆವಲಪರ್ ಹೆಜಮಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಎನ್‌ಎಂಪಿಟಿ ನ್ಯೂ ಪೋರ್ಟ್‌ ಬಳಿ ನಡೆದ ಪ್ರಾಣಿ ಪಕ್ಷಿಗಳ ಉಚಿತ ಕ್ಷೇಮ ಚಿಂತನ ವಾಹನದ ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಾಜಿ ಸಚಿವ ಕೃಷ್ಣ ಪಾಲೆಮಾರ್‌, ರಾಜಪ್ಪ, ಗೀತಾಂಜಲಿ ಸುವರ್ಣ, ಕಿರಣ ಜೋಗಿ, ಸುಧಾಕರ ಶೆಟ್ಟಿ, ರಜನಿ ದುಗ್ಗಣ್ಣ, ಉದ್ಯಮಿ ದಯಾನಂದ ಹೆಜಮಾಡಿ, ಬಾರ್ಕೂರು ದಾಮೋದರ ಶರ್ಮ, ಜಗನ್ನಾಥ್‌ ಶೆಟ್ಟಿ ಬಾಳ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next