Advertisement

ಜಗನ್ಮೋಹನ ರೆಡ್ಡಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಆಜೀವ ಮುಂದುವರಿಕೆ

01:56 AM Jul 10, 2022 | Team Udayavani |

ಅಮರಾವತಿ: ಆಂಧ್ರಪ್ರದೇಶ ಸಿಎಂ ವೈ.ಎಸ್‌. ಜಗನ್ಮೋಹನ ರೆಡ್ಡಿ ಅವರು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಜೀವನಪರ್ಯಂತ ಮುಂದುವರಿಯಲಿದ್ದಾರೆ.

Advertisement

ಈ ಬಗ್ಗೆ ಅಮರಾವತಿಯಲ್ಲಿ ನಡೆದ ಪಕ್ಷದ ಎರಡು ದಿನಗಳ ವಿಶೇಷ ಸಭೆ ಯಲ್ಲಿ ನಿರ್ಣಯ ಮಂಡಿಸಿ ಅಂಗೀಕರಿಸಲಾಗಿದೆ.

ಈ ಬಗ್ಗೆ ಪಕ್ಷದ ನಾಯಕರು ಶೀಘ್ರವೇ ಚುನಾವಣ ಆಯೋಗಕ್ಕೆ ಮನವಿ ಸಲ್ಲಿಸಲಿದ್ದಾರೆ. ಪಕ್ಷದ ಹೆಸರನ್ನು ವೈಎಸ್‌ಆರ್‌ಸಿ ಎಂದು ಹೃಸ್ವರೂಪ ದಲ್ಲಿ ಇರಿಸುವ ಬಗ್ಗೆ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ.

ಕಾಂಗ್ರೆಸ್‌ನಲ್ಲಿ ಇದ್ದ ಜಗನ್‌ ರಾಜೀನಾಮೆ ನೀಡಿ ಯುವಜನ ಶ್ರಮಿಕ ರೈತು ಕಾಂಗ್ರೆಸ್‌ ಪಕ್ಷ (ವೈಎಸ್‌ಆರ್‌ಸಿ) ಸ್ಥಾಪನೆ ಮಾಡಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next