Advertisement

Andhra Pradesh; ಇಂದು ಸಿಎಂ ಆಗಿ ಚಂದ್ರಬಾಬು ಪ್ರಮಾಣ

12:19 AM Jun 12, 2024 | Team Udayavani |

ಅಮರಾವತಿ: ಆಂಧ್ರಪ್ರದೇಶದ ನೂತನ ಸಿಎಂ ಆಗಿ ಬುಧವಾರ ಟಿಡಿಪಿಯ ಚಂದ್ರಬಾಬು ನಾಯ್ಡು ಪ್ರಮಾಣ ಸ್ವೀಕ ರಿಸಲಿದ್ದಾರೆ. ಗನ್ನಾವರಂ ಏರ್‌ಪೋರ್ಟ್‌ ಸಮೀಪದ ಕೇಸರಪಲ್ಲೆ ಐಟಿ ಪಾರ್ಕ್‌ ನಲ್ಲಿ ನಾಯ್ಡು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Advertisement

ರಾಜ್ಯಪಾಲರಾದ ಎಸ್‌.ಅಬ್ದುಲ್‌ ನಜೀರ್‌ ಅವರು ಪ್ರಮಾಣ ವಚನ ಭೋದಿಸಲಿದ್ದು, ಪ್ರಧಾನಿ ಮೋದಿ ಬಿಜೆಪಿಯ ಅಗ್ರ ನಾಯಕರು, ತೆಲುಗು ನಟ ಚಿರಂಜೀವಿ, ಪವನ್‌ ಕಲ್ಯಾಣ್‌, ಮೋಹನ್‌ ಬಾಬು, ಜ್ಯೂನಿಯರ್‌ ಎನ್‌ಟಿಆರ್‌ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪವನ್‌ ಜನಸೇನಾ ಪಕ್ಷದ ಶಾಸಕಾಂಗ ನಾಯಕ: ಡಿಸಿಎಂ

ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ಜನ ಸೇನಾ ಶಾಸಕಾಂಗ ನಾಯಕನಾಗಿ ಪವನ್‌ ಕಲ್ಯಾಣ್‌ ಅವರನ್ನು ಪಕ್ಷದ ಶಾಸಕರು ಆಯ್ಕೆ ಮಾಡಿದ್ದಾರೆ. ಜನಸೇನಾ ಪಕ್ಷವು 21 ಶಾಸಕರನ್ನು ಹೊಂದಿದೆ. ಇದೇ ವೇಳೆ, ಪವನ್‌ ಕಲ್ಯಾಣ್‌ ಆಂಧ್ರ ಡಿಸಿಎಂ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next