Advertisement

ಋಷಿಕೊಂಡ ಬಂಗ್ಲೆ ಖರೀದಿ: ಆಂಧ್ರ ಸಿಎಂಗೆ ಸುಕೇಶ್‌ ಪತ್ರ

01:04 AM Jun 23, 2024 | Team Udayavani |

ಹೊಸದಿಲ್ಲಿ: ಹೇಳಿಕೆಗಳಿಂದ ಸುದ್ದಿಯಲ್ಲಿರುವ ವಂಚಕ ಸುಕೇಶ್‌ ಚಂದ್ರಶೇಖರ್‌ ಈ ಬಾರಿ ಜೈಲಲ್ಲಿದ್ದುಕೊಂಡೇ ಆಂಧ್ರಪ್ರದೇಶ ಋಷಿಕೊಂಡದ ಅರಮನೆಯನ್ನು ಖರೀದಿಸುವುದಾಗಿ ಹೇಳಿದ್ದಾನೆ. “ಸರಕಾರ ಏನಾದರೂ ಆ ಅರಮನೆಯನ್ನು ಮಾರುವುದಿದ್ದರೆ ಪ್ರಸಕ್ತ ಮೌಲ್ಯಕ್ಕಿಂತ ಶೇ.20ರಷ್ಟು ಹೆಚ್ಚಿಗೆ ಹಣ ನೀಡಿ ಕೊಂಡುಕೊಳ್ಳುವ ಆಸಕ್ತಿ ನನಗಿದೆ’ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡುಗೆ ಪತ್ರ ಬರೆದಿದ್ದಾನೆ. 200 ಕೋಟಿ ರೂ. ವಂಚನೆ ಆರೋಪದಲ್ಲಿ ಸದ್ಯಕ್ಕೆ ಸುಕೇಶ್‌ ತಿಹಾರ್‌ ಜೈಲಿನಲ್ಲಿದ್ದಾನೆ. ಆಂಧ್ರ ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಪ್ರವಾಸೋದ್ಯಮದ ಹೆಸರಿನಲ್ಲಿ ತಮ್ಮ ಕ್ಯಾಂಪ್‌ ಆಫೀಸ್‌ಗಾಗಿ ಅರಮನೆಯನ್ನೇ ನಿರ್ಮಾಣ ಮಾಡಿಸಿದ್ದಾರೆ ಎಂಬ ವಿಚಾರದಿಂದ ಈ ಪ್ರಕರಣ ಚರ್ಚೆಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next