Advertisement

Andhra ; ಕಾರು ಅಪಘಾತದಲ್ಲಿ ಹುಣಸೂರು ಅಬಕಾರಿ DySP ತಂದೆ ಸಾವು

06:03 PM Sep 03, 2023 | Team Udayavani |

ಹುಣಸೂರು: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ಹುಣಸೂರು ಅಬಕಾರಿ ಡಿವೈಎಸ್ ಪಿ ಕೆ.ಟಿ.ವಿಜಯಕುಮಾರ್ ಅವರ ಕಾರು ಅಪಘಾತವಾಗಿ ಅವರ ತಂದೆ ಮೃತಪಟ್ಟಿದ್ದು, ಡಿವೈಎಸ್‌ಪಿ ಸೇರಿದಂತೆ ಕುಟುಂಬದ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ವಿಜಯಕುಮಾರ್ ತಂದೆ ಗಿರಿಗೌಡ(80) ಮೃತಪಟ್ಟಿದ್ದು, ಕುಟುಂಬ ಸಮೇತ ತಿರುಪತಿಗೆ ತೆರಳಿ ದೇವರ ದರ್ಶನ ಮಾಡಿ ಶುಕ್ರವಾರ ಬೆಂಗಳೂರಿಗೆ ಹಿಂತಿರುಗುತ್ತಿದ್ದ ವೇಳೆ ಆಂಧ್ರಪ್ರದೇಶದ ಪುಲಮುನ್ನೂರು ಬಳಿಯ ಹೆದ್ದಾರಿಯಲ್ಲಿ ಮಧ್ಯರಾತ್ರಿ 1.30 ರ ವೇಳೆ ಲಾರಿಯೊಂದನ್ನು ಹಿಂದಿಕ್ಕುವ ಸಮಯದಲ್ಲಿ ಅಪಘಾತ ಸಂಭವಿಸಿ ಕಾರು ಸಂಪೂರ್ಣ ಜಖಂಗೊಂಡಿದೆ.

ಅವಘಡದಲ್ಲಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ತಂದೆ ಗಿರಿಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿಯಲ್ಲಿ ಕುಳಿತಿದ್ದ ವಿಜಯಕುಮಾರ್ ತೀವ್ರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಅಬಕಾರಿ ಇನ್‌ಸ್ಪೆಕ್ಟರ್ ಲೋಕೇಶ್, ಕಾರಿನಲ್ಲಿದ್ದ ವಿಜಯಕುಮಾರ್‌ ಅವರ ತಾಯಿ ಮತ್ತು ಅಕ್ಕ ಘಟನೆಯಲ್ಲಿ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.

ಅಂತ್ಯ ಸಂಸ್ಕಾರ: ಅಪಘಾತದಲ್ಲಿ ಮೃತ ಪಟ್ಟ ಗಿರಿಗೌಡ ಅವರ ಅಂತ್ಯ ಸಂಸ್ಕಾರ ಸ್ವಗ್ರಾಮ ಮದ್ದೂರು ತಾಲೂಕಿನ ಕೆಸ್ತೂರಿನಲ್ಲಿ ಭಾನುವಾರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next