Advertisement

ಆಂಧ್ರ ಸಿಎಂ ಜಗನ್‌ ಸಂಬಂಧಿ ಅರೆಸ್ಟ್‌

12:12 AM Apr 17, 2023 | Team Udayavani |

ಹೊಸದಿಲ್ಲಿ: ಆಂಧ್ರದ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿಯ ಸಮೀ ಪದ ಸಂಬಂಧಿ ವೈ.ಎಸ್‌.ಭಾಸ್ಕರ್‌ ರೆಡ್ಡಿಯನ್ನು ಸಿಬಿಐ ಬಂಧಿಸಿದೆ.

Advertisement

ಆಂಧ್ರದ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯ (ಜಗನ್‌ ತಂದೆ) ಸಹೋದರ ವೈ.ಎಸ್‌. ವಿವೇ ಕಾನಂದ ರೆಡ್ಡಿಯವರ ಕೊಲೆಯ ಸಂಬಂಧ ಈ ಬೆಳವಣಿಗೆ ನಡೆದಿದೆ. ಪುಲಿವೆಂದು ಲದಲ್ಲಿರುವ ತಮ್ಮ ನಿವಾಸದಲ್ಲಿಯೇ 2019, ಮಾ.15ರಂದು ವಿವೇಕಾನಂದ ರೆಡ್ಡಿ ಸತ್ತುಬಿದ್ದಿದ್ದರು.

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೂ ಕೆಲವೇ ದಿನಗಳ ಮುನ್ನ ನಡೆದಿದ್ದ ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆರಂಭದಲ್ಲಿ ವಿಶೇಷ ತನಿಖಾ ಪಡೆ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. 2020ಕ್ಕೆ ಪ್ರಕರಣದ ತನಿಖೆಗೆ ಸಿಬಿಐಗೆ ಹಸ್ತಾಂತರವಾಗಿತ್ತು. 2021 ಅಕ್ಟೋಬರ್‌ನಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next