Advertisement

ಉ.ಕನ್ನಡದಲ್ಲಿ ಯಾವ್ಯಾವ ರೈಲು ನಿಲುಗಡೆ ಆಗಲಿದೆ…ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದೇನು?

05:48 PM Mar 08, 2023 | Team Udayavani |

ಶಿರಸಿ: ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಬಹುಕಾಲದಿಂದ ಬೇಡಿಕೆ ಇದ್ದ ರೈಲ್ವೆ ನಿಲುಗಡೆ ಮಾಡಲು ರೈಲ್ವೆ ಇಲಾಖೆ ಅನುಮತಿ ನೀಡಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.

Advertisement

ಮಾ.9 ರಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕೊಚುವೆಲಿ – ಮುಂಬೈ ರೈಲ್ವೆ (12201/02) ಹಾಗೂ ಮಾರ್ಚ್ 10 ರಿಂದ ತಿರುವಂತನಪುರ – ಪನವೆಲ್ ನೇತ್ರಾವತಿ ಎಕ್ಷಪ್ರೆಸ್ ರೈಲ್ವೆ (16345/46) ರೈಲು ಭಟ್ಕಳದಲ್ಲಿ ನಿಲುಗಡೆಯಾಗಲಿದೆ.

ಜನರ ಬಹು ದಿನಗಳ ಬೇಡಿಕೆಯನ್ನು ರೈಲ್ವೆ ಇಲಾಖೆಯು ಈಡೇರಿಸಿದೆ. ಈ ಹಿಂದೆ ಜಿಲ್ಲೆಯ ಕರಾವಳಿ ಭಾಗದ ಜನರ ಅಪೇಕ್ಷೆಯ ಮೇರೆಗೆ ರೈಲ್ವೆ ನಿಲುಗಡೆಗೆ ಕೋರಿ ರೈಲ್ವೆ ಇಲಾಖೆಗೆ ಪತ್ರ ಬರೆದು ವಿನಂತಿಸಿದ್ದೆವು.ಇದೀಗ ಜಿಲ್ಲೆಯ ಕರಾವಳಿ ಭಾಗದ ಜನರು ಉತ್ತರ ಭಾರತ ಹಾಗೂ ಕೇರಳಕ್ಕೆ ಪ್ರಯಾಣಿಸಲು ಈ ರೈಲುಗಳ ನಿಲುಗಡೆಯಿಂದ ತುಂಬಾ ಅನುಕೂಲವಾಗಲಿದೆ. ಬಹಳ ಜನರ ಬೇಡಿಕೆಯಾದ ಹಿಸ್ಸಾರ್-ಕೊಯಿಮತ್ತೂರು ರೈಲ್ವೆ (22475/76) ಈ ರೈಲಿಗೆ ಸದ್ಯದಲ್ಲಿ ಕುಮಟಾದಲ್ಲಿ ನಿಲುಗಡೆಯಾಗಲಿದೆ ಎಂದು ಸಂಸದರ ಕಾರ್ಯಾಲಯದ ಪ್ರಕಟನೆಯಲ್ಲಿ ಸುರೇಶ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next