Advertisement

ಪುಟಗೋಸಿ ಪಕ್ಷಕ್ಕೆ ಕಾಂಗ್ರೆಸ್‌ ಸಲಾಂ ಹೊಡೆದಿದೆ: ಸಚಿವ ಹೆಗಡೆ

04:46 PM Jun 02, 2018 | |

ಕುಮಟಾ: ಒಂದು ಕಾಲದಲ್ಲಿ ಕಾಂಗ್ರೆಸ್‌ ಬಿಟ್ಟರೆ ಬೇರೆ ಪಕ್ಷಗಳಿರಲಿಲ್ಲ,ಕಾಂಗ್ರೆಸ್‌ ಎದುರು ಅಭ್ಯರ್ಥಿಗಳು ಇರಲಿಲ್ಲ. ಅಂತಹ ಪಕ್ಷ ಇಂದು ಪುಟಗೋಸಿ ಪಕ್ಷ ಕ್ಕೆ ಸಲಾಂ ಹೊಡೆಯುವ ದಯನೀಯ ಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಸಮ್ಮಿಶ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. 

Advertisement

ಕುಮಟಾದ ಹವ್ಯಕ ಭವನದಲ್ಲಿ ಶಾಸಕ ದಿನಕರ್‌ ಶೆಟ್ಟಿ ಅವರ ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರವಾಗಿ ಕಿಡಿಕಾರಿದರು. 

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷವೆಂಬ ಹೆಗ್ಗಳಿಕೆ ಇರುವ ಕಾಂಗ್ರೆಸ್‌ ಇಂದು ಅಧಿಕಾರಕ್ಕಾಗಿ ಮೂವತ್ತು ಸೀಟ್‌ ಗೆದ್ದಿರುವ ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡೆಯಬೇಕಾಗಿದೆ ಎಂದರು. 

ಜಿಲ್ಲೆಯಲ್ಲಿ ಆರಕ್ಕೆ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರಿಸಿಯೇ ನಾನು ರಾಜಕೀಯ ನಿವೃತ್ತಿ ಪಡೆಯುವುದು. ಭಟ್ಕಳವನ್ನು ಈ ಬಾರಿ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ದೇಶಪಾಂಡೆ ಅವರ ಹಳಿಯಾಳವನ್ನು ಗೆಲ್ಲಬೇಕಾಗಿದೆ. ಅವರು ಬಿಜೆಪಿಗೆ ಬರುತ್ತಾರೋ ,ನಮ್ಮ ಅಭ್ಯರ್ಥಿ ಗೆಲ್ಲುತ್ತಾರೋ ಒಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕೆನ್ನುವುದು ನಮ್ಮ ಗುರಿ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next