Advertisement

ವೆಂಕಟೇಶ್ವರ ದೇಗುಲದಲ್ಲಿ ಅನ್ನಕೂಟ ಉತ್ಸವ

08:21 PM Nov 23, 2020 | Suhan S |

ಕಾಳಗಿ: ತಾಲೂಕಿನ ಸುಗೂರ (ಕೆ) ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಶುಕ್ಲ ಪಕ್ಷದ ಸಪ್ತಮಿ ದಿನದಂದು ಶನಿವಾರ ರಾತ್ರಿ ದೇವಸ್ಥಾನದ ಮುಖ್ಯಸ್ಥ ಪವನದಾಸ ಮಹಾರಾಜರ ನೇತೃತ್ವದಲ್ಲಿ ಸಂಭ್ರಮದಿಂದ ಅನ್ನಕೂಟ ಉತ್ಸವ ನಡೆಯಿತು.

Advertisement

ಅನ್ನಕೂಟ ಉತ್ಸವ ನಿಮಿತ್ಯವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ವೆಂಕಟೇಶ್ವರ ಹಾಗೂ ಅನ್ನಪೂರ್ಣೇಶ್ವರಿ ದೇವಿ ಬೆಳ್ಳಿ ಮೂರ್ತಿಗೆ ವಿಶೇಷ ಅಲಂಕಾರ, ಅಭಿಷೇಕ, ತೊಮಲಾ ಸೇವೆ, ತುಳಸಿ ಅರ್ಚನೆ ಮಾಡಿ 56 ಪ್ರಕಾರದ ವಿವಿಧ ಅಡುಗೆ ತಯಾರಿಸಿ ನೈವೇದ್ಯ ಅರ್ಪಿಸಿದರು. ಸ್ಟೇಷನ್‌ ಬಬಲಾದ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು, ದೇವಸ್ಥಾನದ ಅರ್ಚಕ ಕೇಶವದಾಸ ಮಹಾರಾಜ, ಬಾಲಕದಾಸ ನಾಗಾಸಾಧು, ಸಂತೋಷ ಪಾಟೀಲ, ವಿಶಾಲ ಪವಾರ, ಪರಮೇಶ್ವರ ಪಾಟೀಲ, ದತ್ತಾತ್ರೇಯ ಮುಚ್ಚಟ್ಟಿ, ಸಿದ್ದು ಕೇಶ್ವರ, ಸಂಜು ರಾಠೊಡ, ಮಾಣಿಕರಾವ್‌ ಪೊಲೀಸ್‌ ಪಾಟೀಲ, ಶರಣಯ್ಯ ಸ್ವಾಮಿ, ಖೇಮು ರಾಠೊಡ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಶ್ರೀ ವೆಂಕಟೇಶ್ವರನು ಒಂದು ಸಂದರ್ಭದಲ್ಲಿ ಅನ್ನಗೃಹಕ್ಕೆ ಆಗಮಿಸಿದಾಗ ಅವರಿಗೆ ದೇವಿ ಅನ್ನಪೂರ್ಣೆàಶ್ವರಿ ಮೇಲೆ ಪ್ರೇಮವಾಗಿ ಅವರಿಬ್ಬರಿಗೂ ಮದುವೆ ಆಗುತ್ತದೆ. ಮದುವೆಯಾದ ಕೆಲ ದಿನಗಳ ನಂತರ ವೆಂಕಟೇಶ್ವರ ಸ್ವಾಮಿ ಹಿಂದಿರುಗಿ ತಮ್ಮ ಸ್ಥಾನಕ್ಕೆ ಬರುವ ದಿನದಂದು ಪುರದ ಜನರಿಂದ ಸಂಭ್ರಮ ಆಚರಿಸಿ, ವೈವಿದ್ಯಮಯವಾದ 56 ಪ್ರಕಾರದ ಆಹಾರ ಪದಾರ್ಥ ತಯಾರಿಸಿ ವೆಂಕಟೇಶ್ವರ ಸ್ವಾಮಿಗೆ ಉಣಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನ ವರೆಗೂ ಜಗತ್ತಿನ ಎಲ್ಲ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಇಂದಿಗೂ ಅನ್ನಕೂಟ ಉತ್ಸವದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿವರ್ಷ ದೀಪಾವಳಿ ಹಬ್ಬದ ನಂತರ ಬರುವ ಶುಕ್ಲ ಪಕ್ಷದ ಅವಧಿಯಲ್ಲಿ ಯಾವಾಗ ಬೇಕಾದರೂ ಅನ್ನಕೂಟ ಆಚರಿಸಬಹುದಾಗಿದೆ. ಇದೆ ಹಿನ್ನೆಲೆಯಲ್ಲಿ ಕಳೆ 10 ವರ್ಷಗಳಿಂದ ಸುಗೂರ (ಕೆ) ದೇಗುಲದಲ್ಲಿ ಪ್ರತಿವರ್ಷ ಅನ್ನಕೂಟ ಉತ್ಸವ ನಡೆಯುತ್ತಿದೆ. –ಪವನದಾಸ ಮಹಾರಾಜ, ದೇವಸ್ಥಾನದ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next