Advertisement

ವಾಲ್ಮೀಕಿ ಜನಾಂಗದ ಯುವಕನಿಗೆ ದೀಕ್ಷೆ

11:27 AM May 10, 2017 | Team Udayavani |

ಉಡುಪಿ: ಬಳ್ಳಾರಿ ಜಿಲ್ಲೆ ಹಂಪಿ ಸಮೀಪದ ಕಮಲಾಪುರ ಮೂಲದ ಯುವಕ ಶಶಿಶೇಖರ ಅವರಿಗೆ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವೈಷ್ಣವ ದೀಕ್ಷೆ ನೀಡಿದರು. ಶಶಿಶೇಖರ ಅವರು ಹುಬ್ಬಳ್ಳಿಯಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. 

Advertisement

ಪುಣೆಯ ಸ್ನೇಹಿತನೊಬ್ಬ ತಿಳಿಸಿದಂತೆ ನಾನು ಹುಬ್ಬಳ್ಳಿಯಿಂದ ಇದಕ್ಕಾಗಿ ಬಂದೆ. ನಾನು ಹಿಂದುಳಿದ ವರ್ಗದವ. ದೀಕ್ಷೆ ಸ್ವೀಕಾರದಿಂದ ನನ್ನ ಜಾತಿಗೇನೂ ಕುಂದು ಬರುವುದಿಲ್ಲ ಎನ್ನುವುದು ತಿಳಿಯಿತು. ನಾನು ಬಂದ ದಿನ ಏಕಾದಶಿ, ಮರುದಿನ ದ್ವಾದಶಿಯಾದ ಕಾರಣ ಆಗಲಿಲ್ಲ. ತ್ರಯೋದಶಿಯಂದು ಬೆಳಗ್ಗೆ ದೀಕ್ಷೆ ನೀಡಿದರು. ನನ್ನ ಮನಸ್ಸಿಗೆ ತೃಪ್ತಿಯಾಗಿದೆ ಎಂದು ಶಶಿಶೇಖರ ಹೇಳಿದ್ದಾರೆ. 

ಭಕ್ತರು ಅಪೇಕ್ಷೆಪಟ್ಟಂತೆ ಭಕ್ತಿ ದೀಕ್ಷೆಯನ್ನು ಪೇಜಾವರ ಶ್ರೀಗಳು ನೀಡುತ್ತಿದ್ದಾರೆ. ಏಕಾದಶಿ, ಪಾಡ್ಯ ಮೊದಲಾದ ಕೆಲವು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಶ್ರೀಗಳು ಮಂತ್ರದೀಕ್ಷೆ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next