Advertisement

ಮೀನುಗಾರಿಕೆಗೆ ತೆರಳಿದ್ದ ಬೋಟ್ ನಲ್ಲಿ ಇಂಜಿನ್ ಸಮಸ್ಯೆ: ತಪ್ಪಿದ ದುರಂತ

03:06 PM Aug 27, 2020 | keerthan |

ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ ಬೋಟ್ ನಲ್ಲಿ ಇಂಜಿನ್ ಸಮಸ್ಯೆ ಕಂಡುಬಂದು ಸಕಾಲದಲ್ಲಿ ಕಾರ್ಯಾರಣೆ ನಡೆಸಿ ದುರಂತ ತಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.

Advertisement

ಮಲ್ಪೆಯಿಂದ ಆಗಸ್ಟ್ 25 ( ಮಂಗಳವಾರ ರಾತ್ರಿ) ರಂದು ಹೊರಟಿದ್ದ ಕೃಷ್ಣ ಹೆಸರಿನ ಬೋಟ್ ಬುಧವಾರ ಸಂಜೆ ಭಟ್ಕಳದ ನೇತ್ರಾಣಿ ಸಮೀಪ ಸಮಸ್ಯೆಗೆ ಸಿಲುಕಿತ್ತು. ಬೋಟ್ ನ ಇಂಜಿನ್ ಭಾಗಕ್ಕೆ ನೀರು ನುಗ್ಗಿದ್ದ ಕಾರಣ ದೋಷ ಕಂಡುಬಂದಿತ್ತು ಎನ್ನಲಾಗಿದೆ.

ಬೋಟ್ ನಲ್ಲಿ ಏಳು ಜನರು ಇದ್ದರು. ಕೂಡಲೇ ಇನ್ನೊಂದು ಬೋಟ್ ಕಳುಹಿಸಿ ಆ ಅದರ ಸಹಾಯದಿಂದ ಬೋಟ್ ಅನ್ನು ಮಲ್ಪೆಗೆ ಎಳೆದು ತರಲಾಗುತ್ತದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬೋಟ್ ಮಾಲಕ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next