Advertisement

ರಾಷ್ಟ್ರಪತಿಗೆ ಕರಿಬಾವುಟ: 6 AMU ವಿದ್ಯಾರ್ಥಿ ನಾಯಕರಿಗೆ ನೊಟೀಸ್‌

03:49 PM Mar 07, 2018 | udayavani editorial |

ಹೊಸದಿಲ್ಲಿ : ಆಲೀಗಢ ಮುಸ್ಲಿಂ ವಿವಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌  ಬಂದಿದ್ದ ವೇಳೆ ಅವರಿಗೆ ಕಪ್ಪು ಬಾವುಟ ತೋರಿಸಲಾದ ಪ್ರಕರಣಕ್ಕೆ ಸಂಬಂಧಿಸಿ ವಿವಿ ವಿದ್ಯಾರ್ಥಿ ಸಂಘದ ಆರು ಮಂದಿ ನಾಯಕರಿಗೆ ನೊಟೀಸ್‌ ಜಾರಿ ಮಾಡಲಾಗಿದೆ. 

Advertisement

ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕೆ ರಾಷ್ಟ್ರಪತಿ ಕೋವಿಂದ್‌ ಅವರಿಗೆ ಆಹ್ವಾನ ಕಳುಹಿಸಲಾದಾಗ ಎಎಂಯು ವಿದ್ಯಾರ್ಥಿ ಸಂಘ “ರಾಷ್ಟ್ರಪತಿಗಳನ್ನು ಸ್ವಾಗತಿಸುವುದಕ್ಕೆ ಅಡ್ಡಿ ಇಲ್ಲ; ಆದರೆ ಸಂಘ ಮನೋಭಾವದವರಿಗೆ ಕ್ಯಾಂಪಸ್‌ ಪ್ರವೇಶ ಇಲ್ಲ’ ಎಂದು ಹೇಳಿದ್ದರು. 

ಕಳೆದ 32 ವರ್ಷಗಳಲ್ಲಿ ದೇಶದ ಯಾವುದೇ ರಾಷ್ಟ್ರಪತಿಗಳು ಎಎಂಯು ಘಟಿಕೋತ್ಸವದಲ್ಲಿ ಪಾಲ್ಗೊಂಡಿರಲಿಲ್ಲ. ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‌ ಸಿಂಗ್‌ ಅವರು 1986ರಲ್ಲಿ ಎಎಂಯು ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next