Advertisement

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

04:47 PM Mar 22, 2023 | Team Udayavani |

ಜಲಂಧರ್: ಪರಾರಿಯಾಗಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಮಾರ್ಚ್ 18 ರಂದು ತಪ್ಪಿಸಿಕೊಂಡು ಬಂದ ನಂತರ ಜಲಂಧರ್ ಬಳಿಯ ಗುರುದ್ವಾರದಲ್ಲಿ ಜನರಿಂದ ಆಹಾರ ಮತ್ತು ಬಟ್ಟೆಗಳನ್ನು ನೀಡುವಂತೆ ಒತ್ತಾಯಿಸಿದ್ದ. ಅಮೃತಪಾಲ್ ಸಿಂಗ್ ನನ್ನು ಬಂಧಿಸಲು ಪಂಜಾಬ್ ಪೊಲೀಸರು ನಡೆಸಿದ ಬೃಹತ್ ಶೋಧ ಕಾರ್ಯಾಚರಣೆ ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿದೆ.

Advertisement

ವಾರಿಸ್ ಪಂಜಾಬ್‌ನ ಸ್ವಯಂ-ಘೋಷಿತ ಮುಖ್ಯಸ್ಥ ಅಮೃತಪಾಲ್ ಸಿಂಗ್ ಶನಿವಾರ (ಮಾರ್ಚ್ 18) ಜಲಂಧರ್ ಜಿಲ್ಲೆಯಲ್ಲಿ ಕಾರ್ ಚೇಸ್ ಮಾಡಿದ ನಂತರ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಆತ ಪರಾರಿ ಯಾಗಲು ಬಳಸಿದ್ದ ಪ್ಲಾಟಿನಾ ಬೈಕ್ ಜಲಂಧರ್ ನಿಂದ 45 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ದಾರಾಪುರ ಪ್ರದೇಶದಿಂದ ಪೊಲೀಸರು ಬೈಕ್ ವಶಪಡಿಸಿಕೊಂಡಿದ್ದಾರೆ. ದಾರಾಪುರ ಪ್ರದೇಶದ ರಾಜಕಾಲುವೆ ದಡದಲ್ಲಿ ಬೈಕನ್ನು ನಿಲ್ಲಿಸಲಾಗಿತ್ತು.

ಖಲಿಸ್ತಾನಿ ನಾಯಕ ತನ್ನ ಸಹಾಯಕರೊಂದಿಗೆ ಜಲಂಧರ್‌ನಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿದನು ಮತ್ತು ಸುಮಾರು ಒಂದು ಗಂಟೆ ಅಲ್ಲಿಯೇ ಇದ್ದ. ಅವನು ತನ್ನ ಸಿಖ್ ನಿಲುವಂಗಿಯನ್ನು ತೆಗೆದು ಅಂಗಿ, ಪ್ಯಾಂಟ್ ಧರಿಸಿ ಮತ್ತು ಗುರುದ್ವಾರ ಸಿಖ್ ಬೋಧಕನ ಮಗನಿಗೆ ಸೇರಿದ ಗುಲಾಬಿ ಪೇಟವನ್ನು ಕಟ್ಟಿದ್ದ.

ಹರಿಯಾಣದ ರೇವಾರಿಯಲ್ಲಿ ವ್ಯಕ್ತಿಯೊಬ್ಬನಿಗೆ ಕರೆ ಮಾಡಲು ಅಮೃತಪಾಲ್ ಜಲಂಧರ್ ಮೂಲದ ಸಿಖ್ ಬೋಧಕರ ಫೋನ್ ಬಳಸಿ ಇತರ ಬೆಂಬಲಿಗರಿಗೂ ಕರೆ ಮಾಡಿ ಎರಡು ದ್ವಿಚಕ್ರವಾಹನ ತರುವಂತೆ ಹೇಳಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿಖ್ ಬೋಧಕ ಮಗ ಮದುಮಗನಾಗಿದ್ದನು ಮತ್ತು ಅಮೃತಪಾಲ್ ಸಿಂಗ್ ಗುರುದ್ವಾರವನ್ನು ಪ್ರವೇಶಿಸಿದಾಗ ಕುಟುಂಬ ಅತಿಥಿಗಳನ್ನು ನಿರೀಕ್ಷಿಸುತ್ತಿತ್ತು.ಅಮೃತಪಾಲ್ ಮತ್ತು ಅವರ ಸಹಾಯಕರನ್ನು ತಮ್ಮ ಅತಿಥಿಗಳೆಂದು ತಪ್ಪಾಗಿ ಭಾವಿಸಿ ಅವರನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು. ಕುಟುಂಬ ಸದಸ್ಯರಿಗೆ ಅಮೃತಪಾಲ್ ಮತ್ತು ಸಹಚರರು ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

Advertisement

ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರರನ್ನು ಬಂಧಿಸಲು ಉತ್ತರಾಖಂಡ ಪೊಲೀಸರು ಮಂಗಳವಾರ ಗುರುದ್ವಾರಗಳು, ಹೋಟೆಲ್‌ಗಳು ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಯ ಭಾರತ-ನೇಪಾಳ ಗಡಿಯ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಅಮೃತಪಾಲ್ ಸಿಂಗ್ ನನ್ನು ಗುರುತಿಸಲು ಮತ್ತು ಗುರುತಿಸಲು ಜನರು ಸಹಾಯ ಮಾಡಬಹುದೆಂಬ ಭರವಸೆಯಲ್ಲಿ, ಪೊಲೀಸರು ಸಂಭವನೀಯ ಅವತಾರಗಳ ಸೆಟ್ ಅನ್ನು ಬಿಡುಗಡೆ ಮಾಡಿದ್ದು ಏಳು ವಿಭಿನ್ನ ಚಿತ್ರಗಳುಲ್ಲಿ ಕ್ಲೀನ್ ಶೇವ್ ಮಾಡಿದ ಅಥವಾ ಗಡ್ಡ ಹೊಂದಿದ ಲುಕ್ ಮತ್ತು ವಿಭಿನ್ನ ಪೇಟಗಳು ಮತ್ತು ವೇಷಗಳನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ಆತನ ಚಿಕ್ಕಪ್ಪ ಮತ್ತು ಇತರ ಇಬ್ಬರು ಸಹಾಯಕರನ್ನು ಮಂಗಳವಾರ ಅಸ್ಸಾಂಗೆ ಕರೆದೊಯ್ಯಲಾಗಿದೆ. ಭಾನುವಾರ, ಅವರ ಇತರ ನಾಲ್ವರು ಸಹಚರರನ್ನು ದಿಬ್ರುಗಢ ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಗಿತ್ತು.

ಪತ್ನಿಯ ವಿಚಾರಣೆ
ಪ್ರಸ್ತುತ ಇಬ್ಬರು ಡಿಎಸ್ಪಿ ಮಟ್ಟದ ಅಧಿಕಾರಿಗಳು ಅಮೃತಪಾಲ್ ನ ಪತ್ನಿ ಕಿರಣ್ ದೀಪ್ ಕೌರ್ ಅವರನ್ನು ಜಲ್ಲುಪುರ್ ಖೇಡಾದಲ್ಲಿ ವಿದೇಶಿ ಧನಸಹಾಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ.

ಅಮೃತಪಾಲ್ ಸಿಂಗ್ ಸಹಾಯಕ ದಲ್ಜಿತ್ ಕಲ್ಸಿಯ ಪತ್ನಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ತೆರಳಿ ಅವರ ಮೇಲೆ ವಿಧಿಸಲಾಗಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್‌ಎಸ್‌ಎ) ರದ್ದುಗೊಳಿಸುವಂತೆ ಕೋರಿದ್ದಾಳೆ. ದಲ್ಜಿತ್ ಸದ್ಯ ಅಸ್ಸಾಂನ ದಿಬ್ರುಗಢದಲ್ಲಿ ಬಂಧನದಲ್ಲಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next