Advertisement

Bengaluru: ಅತ್ತೆ ಮನೆಯಲ್ಲೇ ಚಿನ್ನ ಕದ್ದ ಅಳಿಯ!

11:34 AM Jul 13, 2024 | Team Udayavani |

ಬೆಂಗಳೂರು: ಅತ್ತೆಯ ಮನೆಯಲ್ಲೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಅಳಿಯ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆರೋಪಿಯಿಂದ 3.8 ಲಕ್ಷ ಮೌಲ್ಯದ 70 ಗ್ರಾಂ. ತೂಕದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

Advertisement

ಕಮಲನಗರದ ನಿವಾಸಿ ಪರಶುರಾಮ (29) ಬಂಧಿತ.

ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ವಾಸವಿದ್ದ ನಾಗಮ್ಮ ತಮ್ಮ ಮಗಳನ್ನು ಆರೋಪಿ ಪರಶುರಾಮನಿಗೆ ವಿವಾಹ ಮಾಡಿಕೊಟ್ಟಿದ್ದರು. ಪರಶುರಾಮ್‌ ಯಾವುದೇ ಕೆಲಸವಿಲ್ಲದೆ ಓಡಾಡಿಕೊಂಡಿದ್ದ.

ಜುಲೈ 6 ರಂದು ನಾಗಮ್ಮ ಹಾಗೂ ಮಗಳು ದೇವಾಲಯಕ್ಕೆ ಹೋಗಿದ್ದರು. ಆ ವೇಳೆ ಸಮಯ ಸಾಧಿಸಿ ಆರೋಪಿಯು ಮನೆಯದ್ದ 70 ಗ್ರಾಂ. ಚಿನಾಭರಣ ಕಳವು ಮಾಡಿ ಪರಾರಿಯಾಗಿದ್ದ.

ಇತ್ತ ಮನೆಗೆ ಬಂದ ತಾಯಿ-ಮಗಳು ಪರಶುರಾಮ್‌ ಕೃತ್ಯದ ಬಗ್ಗೆ ತಿಳಿದುಕೊಂಡು ರಾಜಗೋಪಾಲನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಗ್ಗೆರೆ ಮುಖ್ಯರಸ್ತೆಯ ಏಟ್ರಿಯಾ ಹೋಟೆಲ್‌ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next