Advertisement

ಎಲ್ಲೆಡೆ ಕಾಂಗ್ರೆಸ್‌ ಪಕ್ಷಕ್ಕೆ ಭರಪೂರ ಬೆಂಬಲ : ವಿನಯಕುಮಾರ್‌ ಸೊರಕೆ

02:48 PM Apr 27, 2023 | Team Udayavani |

ಕಾಪು: ಬಿಜೆಪಿ ಸರಕಾರದ ಭ್ರಷ್ಟಾಚಾರ, ನಿರಂತರ ಬೆಲೆಯೇರಿಕೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿ, ದಬ್ಟಾಳಿಕೆ ಮತ್ತು ಸಮುದಾಯಗಳ ಜನರ ನಡುವೆ ವಿಭಜನೆ ನೀತಿಯಿಂದ ಜನರು ಬೇಸತ್ತು ಹೋಗಿದ್ದಾರೆ. ಇದರಿದಾಗಿ ಜನತೆ ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಭರವಸೆಯನ್ನು ನೀಡುತ್ತಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಅಭ್ಯರ್ಥಿ ವಿನಯಕುಮಾರ್‌ ಸೊರಕೆ ಹೇಳಿದರು.

Advertisement

ಅವರು ಮಂಗಳವಾರ ಕಾಪು ವಿಧಾನ ಸಭಾ ಕ್ಷೇತ್ರದ ಅಲೆವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ನೇತಾಜಿ ನಗರ, 80 ನೇ ಬಡಗುಬೆಟ್ಟು ಶಾಂತಿನಗರ, ಅಲೆವೂರು ದುರ್ಗಾ ನಗರ, ಕೆಮ್ತೂರು ಪರಿಸರದಲ್ಲಿ ಮನೆ ಮನೆ ಮತ ಯಾಚನೆ ನಡೆಸಿ, ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷದ ಮುಖಂಡರಾದ ಹರೀಶ್‌ ಕಿಣಿ, ಶ್ಯಾಮಲಾ ಸುಧಾಕರ್‌, ದಿನೇಶ್‌ ಶೆಟ್ಟಿ, ಕೃಷ್ಣ, ಹರಿಯಪ್ಪ ನಾಯಕ್‌, ಲಕ್ಷ್ಮೀ ನಾಯಕ್‌, ಭಾಸ್ಕರ ಪೂಜಾರಿ, ಸುಂದರ ನಾಯಕ್‌, ರತ್ನ ನಾಯಕ್‌, ಹರಿದಾಸ ನಾಯಕ್‌ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next