Advertisement

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

01:05 AM Oct 02, 2020 | mahesh |

ಮುಂಬೈ: ನಟ ಅಮಿತಾಭ್‌ ಬಚ್ಚನ್‌ ವಿದ್ಯಾರ್ಥಿಯಾಗಿದ್ದ ವೇಳೆ ಶಾಲಾ ಕ್ರಿಕೆಟ್‌ ತಂಡಕ್ಕೆ ಸೇರಲು ಬೇಕಾಗಿದ್ದ 2 ರೂ. ಶುಲ್ಕ ನೀಡದ ಸ್ಥಿತಿ ಇತ್ತು ಎಂದು ಖುದ್ದು ಅಮಿತಾಭ್‌ ಬಚ್ಚನ್‌ ಅವರೇ “ಕೌನ್‌ ಬನೇಗಾ ಕರೋಡ್‌ಪತಿ’ಯ ಇತ್ತೀಚಿನ ಸಂಚಿಕೆಯಲ್ಲಿ ಹೇಳಿದ್ದಾರೆ. ಮುಂಬೈನ ಜಯ ಕುಲಶ್ರೇಷ್ಠ ಎಂಬ ಸ್ಪರ್ಧಿ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದಾಗಿ ತಿಳಿಸಿದರು. ಅವರ ಕತೆಯನ್ನು ಕೇಳಿದ ಬಳಿಕ ಅಮಿತಾಭ್‌ ಬಚ್ಚನ್‌ ಅವರು ತಮ್ಮ ಬಾಲ್ಯದ ಪರಿಸ್ಥಿತಿ ವಿವರಿಸಿದರು. ಜಯ ಕುಲಶ್ರೇಷ್ಠ ಅವರು 12.5 ಲಕ್ಷ ರೂ. ಬಹುಮಾನವಾಗಿ ಪಡೆದುಕೊಂಡು ಕಾರ್ಯಕ್ರಮದಿಂದ ನಿರ್ಗಮಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next