Advertisement

ಐಶ್ವರ್ಯಾ ರೈ ತಂದೆ ನಿಧನಕ್ಕೆ ಅಮಿತಾಭ್‌ ಸಂತಾಪ

09:57 AM Mar 20, 2017 | Team Udayavani |

ಮುಂಬಯಿ: ಅನಾರೋಗ್ಯದಿಂದ ನಿಧನರಾದ ಬಾಲಿವುಡ್‌ ನಟಿ, ಕನ್ನಡತಿ ಐಶ್ವರ್ಯಾ ರೈ ಬಚ್ಚನ್‌  ತಂದೆ ಕೃಷ್ಣರಾಜ ರೈ ಅಂತ್ಯಕ್ರಿಯೆ ಶನಿವಾರ ಮುಂಬಯಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಾಲಿವುಡ್‌ ನಟರಾದ ರಣಧೀರ್‌ ಕಪೂರ್‌, ಶಾರುಕ್‌ಖಾನ್‌, ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಸೇರಿದಂತೆ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಈ ನಡುವೆ ಸೊಸೆ, ನಟಿ ಐಶ್ವರ್ಯಾ ತಂದೆ ನಿಧನಕ್ಕೆ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾವು ನಿಜ ಅದು ಬದುಕಿನ ಒಂದು ಕೊನೆ ಎಂದು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಬಚ್ಚನ್‌ ನೇರವಾಗಿ ಕೃಷ್ಣರಾಜ ರೈ ಹೆಸರು ಬರೆಯದೇ ಇದ್ದರೂ ಸೊಸೆಯ ತಂದೆ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next