Advertisement

ರಾಜ್ಯಸಭೆಗೆ ಅಮಿತ್‌ ಶಾ, ಬಿಜೆಪಿ ಸಂಸದೀಯ ಸಭೆಯಲ್ಲಿ ನಿರ್ಧಾರ

07:50 AM Jul 27, 2017 | Team Udayavani |

ಹೊಸದಿಲ್ಲಿ: ಬಿಹಾರದಲ್ಲಿ ನಡೆದ ಹೈಡ್ರಾಮಾ ಮತ್ತು ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗಳಿಗೆ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ ಪಾಳಯದಿಂದ ಮತ್ತೂಂದು ನಿರೀಕ್ಷಿಸದ  ನಿರ್ಧಾರ ಹೊರಬಿದ್ದಿದೆ. ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸಂಸತ್‌ ಪ್ರವೇಶಕ್ಕೆ ಸಿದ್ಧರಾಗಿದ್ದು, ಗುಜರಾತ್‌ನಿಂದ ಕಣಕ್ಕಿಳಿಯಲಿದ್ದಾರೆ. ಅದಕ್ಕಾಗಿ ಆ.8ರಂದು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಹಾಲಿ ಕೇಂದ್ರ ಸಚಿವೆ ಸ್ಮತಿ ಇರಾನಿ ಕೂಡ ಪ್ರಧಾನಿ ಮೋದಿ ತವರು ರಾಜ್ಯದಿಂದಲೇ ಸ್ಪರ್ಧಿಸಲಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಒಂದರ್ಥದಲ್ಲಿ ಅಗ್ನಿಪರೀಕ್ಷೆಯೇ ಆಗಿದ್ದರಿಂದ ಅಮಿತ್‌ ಶಾ ರಾಷ್ಟ್ರಾಧ್ಯಕ್ಷ ಸ್ಥಾನದ ನಿರ್ವಹಣೆ ಬದಿಗೊತ್ತಿ ರಾಜ್ಯಸಭೆ ಚುನಾವಣೆ ಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ ಮುಂಬರುವ ಐದು ರಾಜ್ಯಗಳ ಚುನಾವಣೆ ಹೊಣೆ ಯೂ ಅವರ ಹೆಗಲಮೇಲಿದ್ದು, ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂದು ಬಿಜೆಪಿ ಪಾಳಯದಿಂದಲೇ ಕೇಳಿಬಂ ದಿತ್ತು. ಆದರೆ ಇವೆಲ್ಲದರ ನಡುವೆ ಬುಧವಾರ ಹಠಾತ್ತಾಗಿ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ಗುಜರಾತ್‌ ಶಾಸಕರು ಸೇರಿ ಹಿರಿಯ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಿತೀಶ್‌ ಕುಮಾರ್‌ ಅವರು ಸಿಎಂ ಹುದ್ದೆಗೆ ರಾಜೀನಾಮೆಯೊಂದಿಗೆ ಮಹಾಘಟಬಂದನ್‌ ಕನಸು ನುಚ್ಚುನೂರಾದ ಬೆನ್ನಲ್ಲೇ ರಾಜಕೀಯ ಸಂಚಲನಕ್ಕೆ ಚಾಲನೆ ಸಿಕ್ಕಿದೆ. ಗುಜರಾತ್‌ನಿಂದ ಆಯ್ಕೆಯಾಗಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ, ಬಿಜೆಪಿ ನಾಯಕ ದಿಲೀಪ್‌ ಪಾಂಡ್ಯ ಹಾಗೂ ಕಾಂಗ್ರೆಸ್‌ ನಾಯಕ ಅಹಮ್ಮದ್‌ ಪಟೇಲ್‌ ಅವಧಿ ಮುಂದಿನ ತಿಂಗಳು ಅಂತ್ಯಗೊಳ್ಳಲಿರುವ ಹಿನ್ನೆಲೆ ಯಲ್ಲಿ ಚುನಾವಣೆ ನಡೆಯಲಿದೆ. ಕೇಂದ್ರಾಡಳಿತ ಪಕ್ಷ ಬಿಜೆಪಿಗೆ ಗುಜರಾತ್‌ ಚುನಾವಣೆ ಸಾಕಷ್ಟು ಪ್ರತಿಷ್ಠೆಯದ್ದಾಗಿದ್ದು, ಅಹಮ್ಮದ್‌ ಪಟೇಲ್‌ ಬದಲಾಗಿ ಆಕ್ಷೇತ್ರದಿಂದ ಅಮಿತ್‌ ಶಾ ಕಣಕ್ಕಿಳಿದು ರಾಜ್ಯಸಭೆ ಪ್ರವೇಶಿಸುವ ಲೆಕ್ಕಾಚಾರ ನಡೆದಿದೆ. ಒಂದೊಮ್ಮೆ ಶಾ ಅಖಾಡಕ್ಕೆ ಇಳಿಯುವುದು ಖಚಿತವಾದಲ್ಲಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯೇ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next