Advertisement

ವಿಚ್ಛಿದ್ರಕಾರಿ ಶಕ್ತಿಗಳ ಕೈವಾಡ: ಮಾತುಕತೆಗೆ ಬರುವಂತೆ ನಡ್ಡಾ ಆಹ್ವಾನ

01:45 AM Jun 19, 2022 | Team Udayavani |

ಚಿತ್ರದುರ್ಗ: “ಅಗ್ನಿ ಪಥ’ ಕ್ರಾಂತಿಕಾರಿ ಯೋಜನೆ ಯಾಗಿದ್ದು, ಇದರಿಂದ ಭಾರತವು ಸೂಪರ್‌ ಪವರ್‌ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

Advertisement

ಮುರುಘರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶ ಉದ್ಘಾ ಟಿಸಿ ಅವರು ಮಾತನಾಡಿದರು. “ಅಗ್ನಿ ಪಥ’ ಅತ್ಯಂತ ವಿಶ್ವಾಸಾರ್ಹ ಯೋಜನೆ. ಆದರೆ ವಿಚ್ಛಿದ್ರಕಾರಿ ಶಕ್ತಿಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ. ಪಿತೂರಿ ಮಾಡುವವರ ಯೋಜನೆಯನ್ನು ವಿಫಲಗೊಳಿಸಿ “ಅಗ್ನಿಪಥ’ದ ಮಹತ್ವ ಅರ್ಥ ಮಾಡಿಕೊಳ್ಳಿ ಎಂದು ಯುವಜನತೆಗೆ ಕರೆ ನೀಡಿದ್ದಾರೆ.

ಅಗ್ನಿವೀರರಾಗಿ ಸೇವೆ ಸಲ್ಲಿಸಿದರೆ ಸರಕಾರಿ ಉದ್ಯೋಗಗಳಲ್ಲಿ ಮೀಸಲು ಸಿಗುತ್ತದೆ. ಯುವಕರು ಗಲಭೆ ಎಬ್ಬಿಸುವುದನ್ನು ಬಿಟ್ಟು ಮಾತುಕತೆಗೆ ಬರಲಿ ಎಂದಿದ್ದಾರೆ.

ದೇಶ-ಸೇನೆ ಮತ್ತು ದೇಶಭಕ್ತಿಯ ಬಗ್ಗೆ ಯೋಚಿಸುವ ಏಕೈಕ ಪಕ್ಷ ಬಿಜೆಪಿ. ಈ ಹಿನ್ನೆಲೆಯಲ್ಲಿ ಯುವಕರು ಪ್ರಧಾನಿ ಮೋದಿ ಮತ್ತು ಬಿಜೆಪಿಯ ಮೇಲೆ ನಂಬಿಕೆ ಇರಿಸಬೇಕು ಎಂದು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next