Advertisement

ಆಂಬ್ಯುಲೆನ್ಸ್‌ ಸೇವೆಯಿಂದ ಜನರಿಗೆ ಅನುಕೂಲ

11:30 AM Feb 25, 2022 | Team Udayavani |

ಬೀದರ: ನಗರದ ಓಲ್ಡ್‌ಸಿಟಿ ತಾಯಿ ಮತ್ತು ಮಕ್ಕಳ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ನೂತನ ಆಂಬ್ಯುಲೆನ್ಸ್‌ ಸೇವೆಗೆ ಶಾಸಕ ರಹೀಂ ಖಾನ್‌ ಗುರುವಾರ ಚಾಲನೆ ನೀಡಿದರು.

Advertisement

ನಂತರ ಮಾತನಾಡುದ ಅವರು, ಆಂಬ್ಯುಲೆನ್ಸ್‌ ಸೇವೆಯಿಂದ ನಗರದ ಓಲ್ಡ್ ಸಿಟಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆಯಲ್ಲಿ ಕೆಕೆಆರ್‌ಡಿಬಿ ಶಾಸಕರ 2 ಕೋಟಿ ರೂ. ಅನುದಾನದಡಿ ಆಂಬ್ಯುಲೆನ್ಸ್‌, ಆಮ್ಲಜನಕ ಸಹಿತ ಹಾಸಿಗೆ, ಎಕ್ಸ್‌ರೇ, ಡಿಜಿಟಲ್‌ ಎಕ್ಸ್‌ರೇ ಯಂತ್ರ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣ ಅಳವಡಿಸಲಾಗಿದೆ ಎಂದು ತಿಳಿಸಿದರು.

ನರ್ಸಿಂಗ್‌ ಸಿಬ್ಬಂದಿ ಆರು ತಿಂಗಳಿಂದ ವೇತನ ಸಿಗದಿರುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಸಂಬಂಧಪಟ್ಟ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮುಖಂಡರಾದ ಅಬ್ದುಲ್‌ ಖದೀರ್‌, ಇರ್ಷಾದ್‌ ಪೈಲ್ವಾನ್‌, ಶೌಕತ್‌ ಅಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರತಿಕಾಂತ ಸ್ವಾಮಿ, ಆಸ್ಪತ್ರೆಯ ಡಾ| ಸೊಹೆಲ್‌ ಇದ್ದರು.

ವಿವಿಧೆಡೆ ಶಾಸಕ-ಎಂಎಲ್ಸಿ ಸಂಚಾರ

Advertisement

ಶಾಸಕ ರಹೀಂಖಾನ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸಿದರು. ಅಂಬೇಡ್ಕರ್‌ ವೃತ್ತ, ಕ್ರಾಂತಿ ಗಣೇಶ, ಶಹಾಗಂಜ್‌ ಕಮಾನ್‌, ಗವಾನ್‌ ಚೌಕ್‌, ಚೌಬಾರಾ, ಸರ್ಕಾರಿ ಪ್ರೌಢಶಾಲೆ, ಸಿದ್ದಿ ತಾಲೀಂ, ನಯಾ ಕಮಾನ್‌, ವಿದ್ಯಾನಗರ- ಚಿದ್ರಿ ರಸ್ತೆ, ಹಳೇ ಆದರ್ಶ ಕಾಲೋನಿ ರಸ್ತೆ, ಗುಂಪಾ ರಿಂಗ್‌ ರಸ್ತೆ ಸೇರಿದಂತೆ ಅನೇಕ ಪ್ರದೇಶಗಳಿಗೆ ಭೇಟಿ ನೀಡಿದರು.

ಹಾಳಾದ ರಸ್ತೆ ದುರಸ್ತಿಪಡಿಸಬೇಕು. ಚರಂಡಿಗಳು ತುಂಬಿಕೊಳ್ಳುತ್ತಿರುವ ಕಾರಣ ಬೃಹತ್‌ ಚರಂಡಿ ನಿರ್ಮಿಸಬೇಕು. ಕಾಲಕಾಲಕ್ಕೆ ಚರಂಡಿ ಶುಚಿಗೊಳಿಸಬೇಕು. ಕಾಲೋನಿಗಳಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ಅನೇಕರು ಮನವಿ ಮಾಡಿದರು.

ನಗರದಲ್ಲಿ ಚರಂಡಿ ಸಮಸ್ಯೆ ಇರುವ ಕಡೆಗಳಲ್ಲಿ ನಗರೋತ್ಥಾನ ಯೋಜನೆ ಹಾಗೂ ಕೆಕೆಆರ್‌ಡಿಬಿ ಅನುದಾನದಲ್ಲಿ ಬೃಹತ್‌ ಚರಂಡಿ ನಿರ್ಮಿಸಲಾಗುವುದು. ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ರಹೀಂ ಖಾನ್‌ ಭರವಸೆ ನೀಡಿದರು.

ಚರಂಡಿ ಸ್ವಚ್ಛತೆ, ನಗರ ನೈರ್ಮಲ್ಯಕ್ಕೆ ಕ್ರಮ ಕೈಗೊಳ್ಳಲು ಪೌರಾಯುಕ್ತರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಹಮ್ಮದ್‌ ಗೌಸ್‌, ಅಬ್ದುಲ್‌ ಅಜಿಜ್‌ ಮುನ್ನಾ, ಶೌಕತ್‌ ಅಲಿ, ಡಿಯುಡಿಸಿ ಪಿಡಿ, ಪೌರಾಯುಕ್ತ ಹಾಗೂ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next