Advertisement

ಜನತಾ ಕರ್ಫ್ಯೂ ನಿರ್ಜನ ರಸ್ತೆಯಲ್ಲಿಯೂ ಆ್ಯಂಬುಲೆನ್ಸ್ -ಕಾರ್ ಮಧ್ಯೆ ಢಿಕ್ಕಿ

11:51 AM Mar 27, 2020 | keerthan |

ವಿಜಯಪುರ: ಜನತಾ ಕರ್ಫ್ಯೂ ಇದ್ದ ಸಂದರ್ಭದಲ್ಲಿ ನಿರ್ಜನ ರಸ್ತೆ ಇದ್ದರೂ ವಿಜಯಪುರ ನಗರದ ಪ್ರಮುಖ ರಸ್ತೆಯಲ್ಲಿ ಆ್ಯಂಬುಲೆನ್ಸ್ ಹಾಗೂ ಕಾರು ಮಧ್ಯೆ ಅಪಘಾತ ನಡೆದಿದೆ.

Advertisement

ಭಾನುವಾರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ 10-30 ರ ಸುಮಾರಿಗೆ ಸಿದ್ದೇಶ್ವರ ದೇವಸ್ಥಾನ ರಸ್ತೆಯಿಂದ ಆಗಮಿಸಿದ ಕಾರು ಮುಖ್ಯ ರಸ್ತೆಯಲ್ಲಿ ಹೊರಡಿದ್ದ ಆ್ಯಂಬುಲೆನ್ಸ್ ಗೆ ಡಿಕ್ಕಿ ಹೊಡೆದಿದೆ.

ಸುದೈವಶಾತ್ ಎರಡೂ ವಾಹನಗಳಲ್ಲಿದ್ದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

ನಗರ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next