Advertisement

ಮಂಗಳೂರು: ಆಂಬ್ಯುಲೆನ್ಸ್-ಬಸ್ ಅಪಘಾತ; ಚಾಲಕನಿಗೆ ಗಾಯ, ರೋಗಿ ಪಾರು

05:27 PM Oct 08, 2022 | Team Udayavani |

ಮಂಗಳೂರು : ಕುಲಶೇಖರ ಚೌಕಿಯಲ್ಲಿ ಆಂಬ್ಯುಲೆನ್ಸ್ ಮತ್ತು ಬಸ್ ನಡುವೆ ಶನಿವಾರ ಮಧ್ಯಾಹ್ನ 3.30 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಆ್ಯಂಬುಲೆನ್ಸ್ ಚಾಲಕ ಗಾಯಗೊಂಡಿದ್ದು, ರೋಗಿ ಅಪಾಯದಿಂದ ಪಾರಾಗಿದ್ದಾರೆ.

Advertisement

ಅಪಘಾತದಿಂದ ಆ್ಯಂಬುಲೆನ್ಸ್ ಜಖಂ ಗೊಂಡಿದ್ದು, ರೋಗಿಯನ್ನು ಮತ್ತು ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ಮುಂಭಾಗ ಜಖಂಗೊಂಡಿದೆ. ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next