Advertisement

ಕಾವೇರಿ ಸಂಗಮದಲ್ಲಿ ಅಂಬರೀಷ್ ಅಸ್ಥಿ ವಿಸರ್ಜನೆ; ಅಭಿಮಾನಿಯ ಹಣ ಕಳವು

05:09 PM Nov 28, 2018 | Team Udayavani |

ಶ್ರೀರಂಗಪಟ್ಟಣ: ಇತ್ತೀಚೆಗೆ ಇಹಲೋಕ ತ್ಯಜಿಸಿದ್ದ ಮಾಜಿ ಸಚಿವ, ಸ್ಯಾಂಡಲ್ ವುಡ್ ಹಿರಿಯ ನಟ ಅಂಬರೀಷ್ ಅವರ ಚಿತಾಭಸ್ಮವನ್ನು ಪುತ್ರ ಅಭಿಷೇಕ್, ಪತ್ನಿ ಸುಮಲತಾ ಬುಧವಾರ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಕಾವೇರಿ ಸಂಗಮದಲ್ಲಿ ವಿಸರ್ಜನೆ ಮಾಡಿದ್ದಾರೆ.

Advertisement

ಚಿತಾ ಭಸ್ಮದೊಂದಿಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ದರ್ಶನ್ ಹಾಗೂ ಕುಟುಂಬ ವರ್ಗದವರು ಕಾವೇರಿ ಸಂಗಮಕ್ಕೆ ಆಗಮಿಸಿದ್ದರು. ಕಾವೇರಿ ನದಿ ಸಂಗಮದಲ್ಲಿ ಪುತ್ರ ಅಭಿಷೇಕ್ ಹಿಮ್ಮುಖವಾಗಿ ನಿಂತುಕೊಂಡು ಅಸ್ಥಿಯನ್ನು ವಿಸರ್ಜಿಸಿದ್ದರು.

ಅಭಿಮಾನಿಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಪಶ್ಚಿಮ ವಾಹಿನಿ ಬದಲು ಕಾವೇರಿ ಸಂಗಮದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡುವ ನಿರ್ಧಾರ ಕೈಗೊಂಡಿದ್ದರು. ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ನೂರಕ್ಕೂ ಅಧಿಕ ಪೊಲೀಸರು ಹಾಗೂ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಬಲರಾಮೇಗೌಡ, ಡಿವೈಎಸ್ಪಿ ರವೀಂದ್ರ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

Advertisement

ಕಾವೇರಿ ಸಂಗಮದಲ್ಲಿ ಹಣ ಕಳೆದುಕೊಂಡ ಅಂಬಿ ಅಭಿಮಾನಿ:

ಅಂಬರೀಷ್ ಅಸ್ಥಿ ವಿಸರ್ಜನೆಯನ್ನು ನೋಡಲು ಕಾವೇರಿ ಸಂಗಮಕ್ಕೆ ಆಗಮಿಸಿದ್ದ ಅಂಬಿ ಅಭಿಮಾನಿಯೊಬ್ಬರ 70 ಸಾವಿರ ರೂಪಾಯಿ ಹಣವನ್ನು ಪಿಕ್ ಪಾಕೆಟ್ ಮಾಡಿರುವ ಘಟನೆ ವರದಿಯಾಗಿದೆ. ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಿಂದ ಆಗಮಿಸಿದ್ದ ಮಹೇಂದ್ರ ಅವರು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದ 70 ಸಾವಿರ ರೂ. ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next