Advertisement

Amarnath ಯಾತ್ರೆ ಮುಕ್ತಾಯ; 4.4 ಲಕ್ಷಕ್ಕೂ ಹೆಚ್ಚು ಯಾತ್ರಿಕರಿಂದ ಪ್ರಾರ್ಥನೆ

05:06 PM Aug 31, 2023 | Team Udayavani |

ಶ್ರೀನಗರ: 62 ದಿನಗಳ ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಗುರುವಾರ ಮುಕ್ತಾಯಗೊಂಡಿದ್ದು, ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಗುಹಾ ದೇಗುಲದಲ್ಲಿ ಈ ವರ್ಷ 4.4 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ ಅನ್ನುವ ಅಂಕಿ ಅಂಶಗಳು ಲಭ್ಯವಾಗಿವೆ.

Advertisement

ಜುಲೈ 1 ರಂದು ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳ ಮೂಲಕ ಪ್ರಾರಂಭವಾದ ಯಾತ್ರೆಯಲ್ಲಿ ಒಟ್ಟು 4,45,338 ಭಕ್ತರು ನೈಸರ್ಗಿಕವಾಗಿ ರೂಪುಗೊಂಡಿರುವ ಹಿಮಗಡ್ಡೆಯ ‘ಶಿವಲಿಂಗ’ಕ್ಕೆ ಪೂಜೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ಯಾತ್ರೆ ವೇಳೆ  ಯಾತ್ರಾರ್ಥಿಗಳು ಮತ್ತು ಸೇವಾ ಪೂರೈಕೆದಾರರು ಸೇರಿ 48 ಜನರು ಸಾವನ್ನಪ್ಪಿದ್ದು, 62 ಮಂದಿ ಗಾಯಗೊಂಡಿದ್ದಾರೆ. ಹವಾಮಾನ ವೈಪರೀತ್ಯ ಸಂಬಂಧಿತ ಘಟನೆಗಳು ಅಥವಾ ನೈಸರ್ಗಿಕ ಕಾರಣಗಳಿಂದ ಸಾವು ಸಂಭವಿಸಿದೆ. ಈ ವರ್ಷ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ (3.65ಲಕ್ಷ) ಹೆಚ್ಚಿದೆ.ಯಾತ್ರೆಯು ಶಾಂತಿಯುತವಾಗಿ ಮುಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next