Advertisement

‘ಮೂಡಬಿದಿರೆ ಬೆಳವಣಿಗೆಯಲ್ಲಿ ಆಳ್ವಾಸ್‌ ಪಾತ್ರ ಮಹತ್ವದ್ದು’

12:24 PM Jun 06, 2018 | Team Udayavani |

ಮೂಡಬಿದಿರೆ : ಆರೋಗ್ಯ, ಶಿಕ್ಷಣ, ಕ್ರೀಡೆ, ಕಲೆಗಳ ನೆಲೆಗಟ್ಟಿನಲ್ಲಿ ಮೂಡಬಿದಿರೆ ನಾಡಿನ ನಕಾಶೆಯಲ್ಲಿ ಎದ್ದು ಕಾಣುವಂತಾಗುವಲ್ಲಿ ‘ಆಳ್ವಾಸ್‌’ ಸಮೂಹ ಸಂಸ್ಥೆಗಳ ಪಾತ್ರ ಮಹತ್ವಪೂರ್ಣವಾಗಿದೆ ಎಂದು ಇಲ್ಲಿನ ಅನಂತಪದ್ಮನಾಭ ಡೆಂಟಲ್‌ ಕ್ಲಿನಿಕ್‌ನ ಮುಖ್ಯಸ್ಥ ಡಾ| ವಿನಯಕುಮಾರ ಹೆಗ್ಡೆ ಹೇಳಿದರು.

Advertisement

ಆಳ್ವಾಸ್‌ ಹೆಲ್ತ್‌ ಸೆಂಟರ್‌ನಲ್ಲಿ ರೂಪಿಸಲಾಗಿರುವ ಕೆಫೆಟೇರಿಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಳ್ವಾಸ್‌ ಪ್ರವರ್ತಕ ಡಾ| ಎಂ. ಮೋಹನ ಆಳ್ವರು ತಮ್ಮ ಕನಸುಗಳನ್ನು ನನಸಾಗಿಸುತ್ತಲೇ ಬರುವ ಜತೆಗೆ ಆಧುನಿಕ ಮೂಡಬಿದಿರೆಯ ಸರ್ವಾಂಗೀಣ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಎಂದರು.

ಮೊಬೈಲ್‌ ಅಪ್ಲಿಕೇಶನ್‌ ಬಿಡುಗಡೆ
ಮೂಡಬಿದಿರೆಯ ದುರ್ಗಾ ಕ್ಲಿನಿಕ್‌ನ ಡಾ| ಬಿ. ರತ್ನಾಕರ ಶೆಟ್ಟಿ ಅವರು ಆರೋಗ್ಯ ಸೇವೆಗೆ ಸಂಬಂಧಿಸಿದ ಮೊಬೈಲ್‌ ಅಪ್ಲಿಕೇಶನ್‌ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್‌ ಹೆಲ್ತ್‌ ಸೆಂಟರ್‌ ನ ಆಡಳಿತ ನಿರ್ದೇಶಕ ಡಾ| ಎಂ. ಮೋಹನ ಆಳ್ವರು ‘ಸೆಂಟ್ರಲ್‌ ಗ್ಯಾಸ್ ‘ ವ್ಯವಸ್ಥೆಯನ್ನು ಉದ್ಘಾಟಿಸಿ, 1980ರ ದಶಕದಲ್ಲಿ ಆರೋಗ್ಯ ಸೌಲಭ್ಯಗಳಿಂದ ವಂಚಿತ ವಾಗಿದ್ದ ಮೂಡಬಿದಿರೆಯಂಥ ಊರಿನಲ್ಲಿ ಆಳ್ವಾಸ್‌ ಹೆಲ್ತ್‌ ಸೆಂಟರ್‌ ಸ್ಥಾಪಿಸಿ, ತಜ್ಞ ವೈದ್ಯಕೀಯ ಸವಲತ್ತುಗಳನ್ನು ಒದಗಿಸಲು ಪಟ್ಟ ಕಷ್ಟ ದ ದಿನಗಳನ್ನು ಸ್ಮರಿಸಿದರು.

ಇದೇ ಸಂದರ್ಭ ಆಳ್ವರು ತಮ್ಮ 66ನೇ ಜನ್ಮದಿನವನ್ನು ದೀಪ ಬೆಳಗುವ ಮೂಲಕ ಆಚರಿಸಿದರು. ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆಯ ಪ್ರವರ್ತಕ ಡಾ| ಸುಧಾಕರ ಶೆಟ್ಟಿ ಸಹಿತ ಗಣ್ಯರು, ಆಳ್ವಾಸ್‌ ಸಿಬಂದಿಗಳು ಡಾ| ಮೋಹನ ಆಳ್ವರಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದರು. ಡಾ| ಸದಾನಂದ ನಾಯಕ್‌, ವಿವೇಕ ಆಳ್ವ, ಡಾ| ವಿನಯ ಆಳ್ವ, ಡಾ| ಹನಾ ಶೆಟ್ಟಿ ಉಪಸ್ಥಿತರಿದ್ದರು.

Advertisement

ಆಳ್ವಾಸ್‌ ಹೆಲ್ತ್‌ ಸೆಂಟರ್‌ನ ವೈದ್ಯಕೀಯ ಅಧೀಕ್ಷಕ ಡಾ| ಹರೀಶ್‌ ನಾಯಕ್‌ ಸ್ವಾಗತಿಸಿ, ವೇಣುಗೋಪಾಲ್‌ ಶೆಟ್ಟಿ ನಿರೂಪಿಸಿದರು. ಡಾ| ಮಮತಾ ಗುರುಪ್ರಸಾದ್‌ ಅಡಿಗ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next