Advertisement

ಕಲಾಸಂಗಮವಾದ ಚಿತ್ರಸಿರಿ

06:10 AM Dec 21, 2018 | |

ಮೂಡಬಿದಿರೆಯ ಆಳ್ವಾಸ್‌ ಪ್ರೌಢಶಾಲಾ ಆವರಣದಲ್ಲಿ ನಡೆದ ಈ ಬಾರಿಯ ಚಿತ್ರಸಿರಿಯಲ್ಲಿ ಹಲವಾರು ಸಮಕಾಲೀನ ಕಲಾಕೃತಿಗಳು ರಚನೆಯಾದುವು.ಜನರು ಬದಲಾವಣೆ ಮತ್ತು ಬೆಳವಣಿಗೆಗಳನ್ನು ಬಯಸುತ್ತಾರೆ. ಯಾವಾಗಲೂ ಒಂದೇ ಪ್ರದೇಶದ ಕಲಾ ರಚನೆಯನ್ನು ನೋಡಿ ಬೇಸತ್ತಿರುವ ಜನರ ಮನಸ್ಸಿಗೆ ಬೇರೆ ಬೇರೆ ಪ್ರದೇಶದ ಕಲಾವಿದರ ಕಲಾ ರಚನೆಗಳನ್ನು ನೋಡಬೇಕೆಂಬ ಆಸೆ ಇರುತ್ತದೆ. ಆದರೆ ಅಂತಹ ಕಲಾ ಶಿಬಿರಗಳನ್ನು ವ್ಯವಸ್ಥಿತವಾಗಿ ನಡೆಸಿ ಕಲಾಪ್ರದರ್ಶನವನ್ನು ಜನರಿಗಾಗಿ ತೆರೆದಿಡುವುದೆಂದರೆ ಸುಲಭದ ಕೆಲಸವಲ್ಲ. ಡಾ| ಮೋಹನ್‌ ಆಳ್ವಾರಂತಹ ಕಲಾಪ್ರೇಮಿಗಳಿಗೆ ಮಾತ್ರ ಇದು ಸಾಧ್ಯ. 

Advertisement

ಈ ಬಾರಿಯ ಚಿತ್ರಸಿರಿ ಸಮಕಾಲೀನ ಕಲಾ ಶಿಬಿರದಲ್ಲಿ 25 ಮಂದಿ ರಾಜ್ಯಮಟ್ಟದ ಚಿತ್ರಕಲಾವಿದರು ಹಾಗೂ 28 ವ್ಯಂಗ್ಯಚಿತ್ರ ಕಲಾವಿದರು ಭಾಗವಹಿಸಿದ್ದು ನೂರಕ್ಕೂ ಹೆಚ್ಚು ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಿದರು. ಆ ಕಲಾಕೃತಿಗಳನ್ನು ವೀಕ್ಷಣೆಗಾಗಿ ಅಚ್ಚುಕಟ್ಟಾಗಿ ಜೋಡಿಸಿಡಲಾಗಿತ್ತು. ಕಲಾವಿದರಾದ ಗಣಪತಿ ಹೆಗಡೆ, ಉಮೇಶ್‌ ವಿ.ಎಂ., ಭವನ್‌ ಪಿ.ಜಿ., ಹೆಚ್‌. ಸುಪ್ರೀತ್‌, ಸತೀಶ್ಚಂದ್ರ ಎಸ್‌.ಎಸ್‌., ಆಕಾಶ್‌ ಎಸ್‌. ಅಳ್ಳಿ., ಯೋಗೀಶ್‌ ಸಿ. ಮಾತಡ್‌, ಶೀಲವಂತ್‌, ಡಾ. ಅಶೋಕ್‌ ಎಸ್‌. ಶಟಕಾರ, ಬಿ.ವಿ.ಕಾಮಾಜಿ, ಗಣೇಶ್‌ ಪಿ. ದೊಡಮನಿ, ಸಂಜೀವ ಕುಲಕರ್ಣಿ, ದಿಲೀಪ್‌ ಡಿ.ಆರ್‌., ರೇಣುಕಾ ಕೇಸರಮಡು, ಕುಮಾರ್‌ ಕೆ.ಜಿ. ,ಮಂಜುನಾಥ್‌ ಹೆಚ್‌.ಪಿ., ದೇವರಾಜ್‌, ಅಬ್ದುಲ್ಲತೀಫ್ ಸಿ., ಅಶ್ವಿ‌ನಿ ಎನ್‌.ಕೆ., ಮಂಜುನಾಥ್‌ ಬಿ. ಬಡಿಗೇರ್‌, ಮಂಜುನಾಥ್‌ ಕೆ.ಭಂಡಾರೆ, ಮಾಲೆ¤àಶ್‌ ಎಂ. ಗರಡಿಮನೆ, ಕೆ.ವಿ.ಕಾಳೆ, ಡಾ.ಸಂತೋಷ್‌ ಕುಮಾರ್‌ ಕುಲಕರ್ಣಿ, ಮಂಜುನಾಥ್‌ ಬಿ ಸೊರಟೂರು ಮುಂತಾದವರು ಕ್ಯಾನ್ವಾಸ್‌ ಮೇಲೆ ತಮ್ಮ ಕೌಶಲವನ್ನು ತುಂಬಿಸಿದರು. ಜನಪದೀಯ ಆಚರಣೆಗಳು, ಪ್ರಚಲಿತ ಸಮಸ್ಯೆಗಳನ್ನು ವಿಷಯವಾಗಿಟ್ಟುಕೊಂಡು ಅದಕ್ಕೆ ಸೃಜನಶೀಲತೆಯ ಸ್ಪರ್ಶಕೊಟ್ಟು ಸಾಂಪ್ರದಾಯಿಕ ಹಾಗೂ ನವ್ಯ ಕೃತಿಗಳನ್ನು ಚಿತ್ರಿಸಿದರು. ಸಾದೃಶ್ಯತೆಯನ್ನು ಮಾತ್ರ ಚಿತ್ರಿಸುವುದು ಕಲಾವಿದನ ಕೆಲಸವಲ್ಲ. ಇಂದ್ರಿಯಗೋಚರ ವಿಷಯವನ್ನು ಸಮಕಾಲೀನತೆಯೊಂದಿಗೆ ಮಂಥನ ಮಾಡಿ ಕ್ಯಾನ್ವಾಸ್‌ ಮೇಲೆ ರೂಪಿಸುವುದು ಕಲಾವಿದನ ಮುಖ್ಯ ಕೆಲಸವಾಗುತ್ತದೆ ಎಂಬ ಅಂಶ ಕಲಾಕೃತಿಗಳನ್ನು ವೀಕ್ಷಿಸಿದಾಗ ನಮಗೆ ಅರಿವಾಗುತ್ತದೆ. ಕೊನೆಯಲ್ಲಿ ಗಣೇಶ ಸೋಮಯಾಜಿ ಅವರಿಗೆ ಚಿತ್ರಸಿರಿ ಪ್ರಶಸ್ತಿ, ಕೆ.ಆರ್‌.ಸ್ವಾಮಿಯವರಿಗೆ ವ್ಯಂಗ್ಯಸಿರಿ ಪ್ರಶಸ್ತಿ ಹಾಗೂ ಎಸ್‌. ತಿಪ್ಪೇಸ್ವಾಮಿಯವರಿಗೆ ಛಾಯಾಚಿತ್ರಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

– ಉಪಾಧ್ಯಾಯ ಮೂಡುಬೆಳ್ಳೆ 

Advertisement

Udayavani is now on Telegram. Click here to join our channel and stay updated with the latest news.

Next