Advertisement

Manipal ಯಾವುದೇ ಮಾಹಿತಿ ನೀಡದಿದ್ದರೂ 1.57 ಲಕ್ಷ ರೂ. ವರ್ಗಾವಣೆ !

11:22 PM Jul 08, 2024 | Team Udayavani |

ಮಣಿಪಾಲ: ಅನಾಮಧೇಯ ಲಿಂಕ್‌ ಕ್ಲಿಕ್‌ ಮಾಡಿದ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆಗೊಂಡ ಘಟನೆ ನಡೆದಿದೆ.

Advertisement

ಮಣಿಪಾಲದ ವರುಣ್‌ ಜು. 7ರಂದು ಮನೆಯಲ್ಲಿದ್ದ ವೇಳೆ ವಾಟ್ಸ್‌ಆ್ಯಪ್‌ಗೆ ಸಂದೇಶ ಬಂದಿತ್ತು. ಅದರಲ್ಲಿ ಐಸಿಐಸಿಐ ಬ್ಯಾಂಕ್‌ನ ಕೆವೈಸಿ ದಾಖಲಾತಿಯ ಪರಿಶೀಲನೆಯ ಲಿಂಕ್‌ ಇದ್ದು, ಅದನ್ನು ಒತ್ತಿದಾಗ ಒಂದು ಬ್ಯಾಂಕ್‌ನ ಪೇಜ್‌ ತೆರೆದುಕೊಂಡಿತು. ಆದರೆ ವರುಣ್‌ ಯಾವುದೇ ರೀತಿಯ ಮಾಹಿತಿ ನೀಡಿಲ್ಲ.

ಲಿಂಕ್‌ ತೆರೆದ 15 ನಿಮಿಷದಲ್ಲಿ 3 ಬೇರೆ ಬೇರೆ ಕಂತುಗಳಲ್ಲಿ ಅವರ ಬ್ಯಾಂಕ್‌ ಖಾತೆಯಿಂದ 1,57,987 ರೂ. ಅಪರಿಚಿತರ ಖಾತೆಗೆ ವರ್ಗಾವಣೆಯಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next