Advertisement

AAP: ಮಲಿವಾಲ್‌ ಸೇರಿ ರಾಜ್ಯಸಭೆಗೆ ಆಪ್‌ನ ಮೂವರ ನಾಮಾಂಕಿತ 

01:07 AM Jan 06, 2024 | Team Udayavani |

ಹೊಸದಿಲ್ಲಿ:  ಆಮ್‌ ಆದ್ಮಿ ಪಕ್ಷವು(ಆಪ್‌) ಶುಕ್ರವಾರ ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಹಾಗೂ ಹಾಲಿ ಸಂಸದರಾದ ಸಂಜಯ್‌ ಸಿಂಗ್‌ ಮತ್ತು ಎನ್‌.ಡಿ.ಗುಪ್ತ ಅವರನ್ನು ರಾಜ್ಯಸಭೆ ಸ್ಥಾನಗಳಿಗೆ ನಾಮಾಂಕಿತಗೊಳಿಸಿದೆ.  ಆಪ್‌ ರಾಷ್ಟ್ರೀಯ ಸಂಚಾಲಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾ ಲ್‌ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯ ಅನಂತರ ಈ ಕುರಿತು ಘೋಷಣೆ ಮಾಡಲಾಯಿತು.

Advertisement

ಸ್ವಾತಿ ಅವರನ್ನು ಮೊದಲ ಬಾರಿಗೆ ರಾಜ್ಯಸಭೆಗೆ ನಾಮಾಂಕಿತ ಗೊಳಿಸಲಾಗಿದೆ. ಸಂಜಯ್‌ ಸಿಂಗ್‌ ಮತ್ತು ಗುಪ್ತಾರನ್ನು 2ನೇ ಅವಧಿಗೆ ಮೇಲ್ಮನೆಗೆ ನಾಮ ನಿರ್ದೇಶನ ಮಾಡಲಾಗಿದೆ. ಸಂಜಯ್‌ ಪ್ರಸ್ತುತ ಅಬಕಾರಿ ಹಗರಣ ಸಂಬಂಧ ಜೈಲಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next