Advertisement

ಬಿಜೆಪಿಯೊಂದಿಗಿನ ಮೈತ್ರಿ ಆತ್ಮಹತ್ಯೆ ಮಾಡಿಕೊಂಡಂತೆ

06:21 PM Oct 01, 2021 | Team Udayavani |

ಪಣಜಿ: ‘ಎರಡು ಬಾರಿ ಧೋಕಾ ನೀಡಿದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದೆಂದರೆ ನಮ್ಮ ಪಕ್ಷ ಆತ್ಮಹತ್ಯೆ ಮಾಡಿಕೊಂಡಂತೆ’ ಎಂದು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ನಾಯಕ ಸುದೀನ್ ಧವಳೀಕರ್ ಅಭಿಪ್ರಾಯ ಪಟ್ಟಿದ್ದಾರೆ .

Advertisement

ಪೊಂಡಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು’ ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿ ಮತ್ತು ಪಶ್ಚಿಮ ಬಂಗಾಳದ ಪಕ್ಷಗಳು ಗೋವಾಕ್ಕೆ ಓಡಿಬಂದಿವೆ. ಈ ರಾಜಕೀಯ ಪಕ್ಷಗಳು ನನ್ನನ್ನು ಸಂಪರ್ಕ ಮಾಡಿವೆ. ಆದರೆ ಗೋವಾ ರಾಜ್ಯದ ಭವಿಷ್ಯ ಯುವ ಪೀಳಿಗೆ ಮತ್ತು ಜ್ಞಾನಯುತ ಗೋವನ್ನರ ಕೈಯ್ಯಲ್ಲಿದೆ. 2022 ಇದು ಗೋವಾ ರಾಜ್ಯಕ್ಕೆ ಪರಿವರ್ತನೆಯ ವರ್ಷವಾಗಿದೆ’ ಎಂದರು.

1963 ರಲ್ಲಿ ಹುಟ್ಟಿಕೊಂಡ ಎಂಜಿಪಿ ಗೋವಾದಲ್ಲಿ ಪ್ರಬಲ ಪಕ್ಷವಾಗಿತ್ತು. ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎನ್ ಡಿ ಎ ಮಿತ್ರ ಪಕ್ಷವಾಗಿತ್ತು.2017 ರ ವಿಧಾನಸಭಾ ಚುನಾವಣೆಯಲ್ಲಿ11 ಶೇಕಡಾ ಮತಗಳನ್ನು ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next