Advertisement

ಮುಖ್ಯಾಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪ

05:54 PM Apr 19, 2022 | Shwetha M |

ಸಿಂದಗಿ: ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸರಬರಾಜು ಯೋಜನೆ ಅಡಿಯಲ್ಲಿ ಪಂಪ್‌ ಆಪರೇಟರ್‌ಗಳನ್ನು ನೇಮಕಾತಿ ಆದೇಶ ನೀಡುತ್ತೇನೆ ಎಂದು ಪುರಸಭೆ ಮುಖ್ಯಾಧಿಕಾರಿ ಅವರು ಹಣ ಪಡೆಯುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸೋಮವಾರ ಪಂಪ್‌ ಆಪರೇಟರ್‌ಗಳು ಪುರಸಭೆ ಅಧ್ಯಕ್ಷ ಡಾ| ಶಾಂತವೀರ ಮನಗೂಳಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸರಬರಾಜು ಯೋಜನೆ ಅಡಿಯಲ್ಲಿ ನಾವು ನಾಲ್ಕು ಜನ ಪಂಪ್‌ ಆಪರೇಟರ್‌ಗಳಾಗಿ ಕಳೆದ 8 ತಿಂಗಳಿಂದ ಕೆಲಸ ಮಾಡುತ್ತಿದ್ದೇವೆ. ಆದರೆ ನಮಗೆ ನೇಮಕಾತಿ ಆದೇಶ ಪತ್ರ ನೀಡಬೇಕು ಎಂದು ಜಲಮಂಡಳಿ ವಿಜಯಪುರ ಅವರಿಂದ ಆದೇಶವಾದರು ನಮಗೆ ನೇಮಕಾತಿ ಆದೇಶ ಪತ್ರ ನೀಡುವಲ್ಲಿ ವಿಳಂಬಾಗಿದೆ.

ನಮಗೆ ನೇಮಕಾತಿ ಪತ್ರ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿಕೊಂಡ ಸಂದರ್ಭದಲ್ಲಿ ಅವರು ತಮಗೆ ತಲಾ 25 ಸಾವಿರ ನೀಡಬೇಕು ಎಂದು ಹೇಳಿದಾಗ ನಾವು 4 ಜನ ಸೇರಿ ಒಂದು ಲಕ್ಷ ಹಣ ನೀಡಿದ್ದೇವೆ. ಆದರೆ ನಮಗೆ ಆದೇಶ ಪತ್ರ ನೀಡಿಲ್ಲ. ಆದ್ದರಿಂದ ತಾವು ತನಿಖೆ ಮಾಡಿ ನಮಗೆ ನ್ಯಾಯ ಒದಗಿಸಿ ಕೊಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ನಮಗೆ ಆದೇಶ ಪತ್ರ ನೀಡಬೇಕು ಎಂದು ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸರಬರಾಜು ಯೋಜನೆ ಅಡಿ ಯಲ್ಲಿ ಪಂಪ್‌ ಆಪರೇಟರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಶಿವಪುತ್ರ ವಡ್ಡರ, ಮಹೇಶ ಹರಿಜನ, ಪ್ರದೀಪ ಬಿರಾದಾರ, ಬಾಬುಗೌಡ ಪಾಟೀಲ ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next