Advertisement

ಏಷ್ಯಾಕಪ್‌ ಕ್ರಿಕೆಟ್‌ ತಂಡದ ಆಯ್ಕೆಯಲ್ಲಿ “ಅನ್ಯ’ಹಸ್ತಕ್ಷೇಪ?

07:00 AM Nov 29, 2018 | Team Udayavani |

ಮುಂಬೈ: ಇತ್ತೀಚೆಗೆ ಮುಗಿದ ಮಹಿಳಾ ಟಿ20 ವಿಶ್ವಕಪ್‌ ಸೆಮಿಫೈನಲ್‌ನಿಂದ ಉತ್ತಮ ಲಯದಲ್ಲಿದ್ದ ಮಿಥಾಲಿ ರಾಜ್‌ರನ್ನು ಹೊರಗಿಡಲಾಗಿತ್ತು. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ರಮಕ್ಕೆ, ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಆಂಗ್ಲ ಮಾಧ್ಯಮವೊಂದು ಇನ್ನೊಂದು ಮಹತ್ವದ ಸುದ್ದಿ ಪ್ರಕಟಿಸಿದೆ. 

Advertisement

ಟೈಮ್ಸ್‌ ಆಫ್ ಇಂಡಿಯಾ ವರದಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾಕಪ್‌ ಏಕದಿನ ಕೂಟದ ವೇಳೆ, ಭಾರತ ತಂಡದ ಆಯ್ಕೆಯಲ್ಲಿ ಬಿಸಿಸಿಐನ ಹಿರಿಯ ಆಡಳಿತಗಾರರೊಬ್ಬರು ಹಸ್ತಕ್ಷೇಪ ಮಾಡಿದ್ದಾರೆ ಎನ್ನಲಾಗಿದೆ. ಕೊಹ್ಲಿ ಗೈರಲ್ಲಿ ರೋಹಿತ್‌ ತಂಡದ ನಾಯಕತ್ವ ವಹಿಸಿದ್ದರು. ಅದೇ ವೇಳೆ ಆಫ್ಘಾನಿಸ್ತಾನದ ವಿರುದ್ಧ ನಡೆದ ಒಂದು ಪಂದ್ಯದಲ್ಲಿ ಧೋನಿ ಹಠಾತ್ತಾಗಿ ನಾಯಕರಾಗಿದ್ದರು. ರೋಹಿತ್‌, ಧವನ್‌ ವಿಶ್ರಾಂತಿ ತೆಗೆದುಕೊಂಡಿದ್ದರು. ಆ ಪಂದ್ಯದಲ್ಲಿ ಒಟ್ಟು ಐದು ಬದಲಾವಣೆಗಳಾಗಿದ್ದವು. ಈ ಪಂದ್ಯದಲ್ಲಿ ಆ ವ್ಯಕ್ತಿಯ ಹಸ್ತಕ್ಷೇಪವಾಗಿದೆ ಎಂದು ಊಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next