Advertisement

ರಗಡ್‌ ಲವರ್‌ ಬಾಯ್: ಚೊಚ್ಚಲ ಚಿತ್ರದ ಬಿಡುಗಡೆ ಖುಷಿಯಲ್ಲಿ ಅಕ್ಷಿತ್

09:51 AM May 27, 2022 | Team Udayavani |

“ನಮ್ಮ ಪ್ಲಾನ್‌ ಪ್ರಕಾರ ಎರಡು ವರ್ಷದ ಹಿಂದೆಯೇ ಈ ಸಿನಿಮಾ ರಿಲೀಸ್‌ ಆಗಿರಬೇಕಿತ್ತು. ಆದ್ರೆ ಕೋವಿಡ್‌, ಲಾಕ್‌ಡೌನ್‌ನಿಂದಾಗಿ ಅನಿವಾರ್ಯವಾಗಿ ರಿಲೀಸ್‌ ಮುಂದೂಡುತ್ತ ಬರಬೇಕಾಯ್ತು. ಅಂತೂ ಎಲ್ಲ ಅಡೆತಡೆಗಳನ್ನ ದಾಟಿ ಈ ವಾರ ನನ್ನ ಮೊದಲ ಸಿನಿಮಾ ರಿಲೀಸ್‌ ಆಗ್ತಿದೆ. ನಿಜ ಹೇಳ್ಬೇಕು ಅಂದ್ರೆ ಡಬ್ಬಿಂಗ್‌ ಆದ್ಮೇಲೆ ನಾನೇ ಸಿನಿಮಾವನ್ನು ನೋಡಿಲ್ಲ. ಫ್ಯಾಮಿಲಿ, ಫ್ರೆಂಡ್ಸ್‌ ಯಾರಿಗೂ ಸಿನಿಮಾ ತೋರಿಸಿಲ್ಲ. ಹಾಗಾಗಿ ಫ‌ಸ್ಟ್‌ ಟೈಮ್‌ ಆಡಿಯನ್ಸ್‌ ಮುಂದೆ ಬರುತ್ತಿರುವುದಕ್ಕೆ, ಇಂಡಸ್ಟ್ರಿಗೆ ಎಂಟ್ರಿಯಾಗುತ್ತಿರುವುದಕ್ಕೆ ಖುಷಿ, ಭಯ, ಎಕ್ಸೆ„ಟ್‌ಮೆಂಟ್‌ ಎಲ್ಲ ಥರದ ಅನುಭವ ಒಟ್ಟಿಗೆ ಆಗುತ್ತಿದೆ…’ ಇದು ನವನಟ ಅಕ್ಷಿತ್‌ ಶಶಿಕುಮಾರ್‌ ಮಾತು.

Advertisement

ಹೌದು, ಕನ್ನಡ ಚಿತ್ರರಂಗದ “ಸುಪ್ರೀಂ ಹೀರೋ’ ಖ್ಯಾತಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ “ಸೀತಾಯಣ’ ಇಂದು ಬಿಡುಗಡೆಯಾಗುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ “ಸೀತಾಯಣ’ ಚಿತ್ರದ ಮೂಲಕ ಅಕ್ಷಿತ್‌ ಶಶಿಕುಮಾರ್‌ ಲವರ್‌ ಬಾಯ್‌ ಕಂ ಆ್ಯಕ್ಷನ್‌ ಹೀರೋ ಆಗಿ ಸ್ಯಾಂಡಲ್‌ ವುಡ್‌ ಮತ್ತು ಟಾಲಿವುಡ್‌ಗೆ ಏಕಕಾಲದಲ್ಲಿ ಎಂಟ್ರಿಕೊಡುತ್ತಿದ್ದಾರೆ. ತಮ್ಮ ಮೊದಲ ಸಿನಿಮಾ ಮತ್ತದರ ಬಿಡುಗಡೆಯ ಬಗ್ಗೆ ಮಾತನಾಡಿದ ಅಕ್ಷಿತ್‌ ಕೆಲ ವಿಷಯಗಳನ್ನು ಹಂಚಿಕೊಂಡರು.

“ನಾವು ಒಂದು ಸಿನಿಮಾಕ್ಕೆ ಎಷ್ಟು ಎಫ‌ರ್ಟ್‌ ಹಾಕಿದ್ದೇವೆ, ಏನೆಲ್ಲ ಮಾಡಿದ್ದೇವೆ ಅನ್ನೋದಕ್ಕಿಂತ ಜನರಿಗೆ ಆ ಸಿನಿಮಾ ಎಷ್ಟರ ಮಟ್ಟಿಗೆ ಇಷ್ಟವಾಗುತ್ತದೆ ಅನ್ನೋ ದಷ್ಟೇ ಮುಖ್ಯವಾಗುತ್ತದೆ. ಜನರಿಗೆ ಸಿನಿಮಾ ಇಷ್ಟವಾದ್ರೆ, ನಾವು ಹಾಕಿದ ಎಫ‌ರ್ಟ್‌ಗೆ ಒಳ್ಳೆಯ ರಿಸೆಲ್ಟ್ ಸಿಕ್ಕಿದಂತೆ. ನನ್ನ ಪ್ರಕಾರ “ಸೀತಾಯಣ’ ಖಂಡಿತವಾಗಿಯೂ ಜನರಿಗೆ ಇಷ್ಟವಾಗುವಂಥ ಸಿನಿಮಾ. ಜನರಿಗೆ ಇಷ್ಟವಾಗುವಂಥದ್ದೇ ಸಿನಿಮಾ ಮಾಡಿದ್ದೇವೆ ಎಂಬ ಭರವಸೆ ನಮಗಿದೆ’ ಎನ್ನುವುದು ಅಕ್ಷಿತ್‌ ಶಶಿಕುಮಾರ್‌ ಮಾತು.

ಇದನ್ನೂ ಓದಿ:ಮಹಿಳಾ ಟಿ20 ಚಾಲೆಂಜ್: ಪಂದ್ಯ ಗೆದ್ದರೂ ಕೂಟದಿಂದ ಹೊರಬಿದ್ದ ಮಂಧನಾ ಪಡೆ; ವೆಲಾಸಿಟಿ ಫೈನಲ್ ಗೆ

ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅಕ್ಷಿತ್‌, “ಈ ಸಿನಿಮಾದಲ್ಲಿ ಮಧ್ಯಮ ವರ್ಗದ ಹುಡುಗನ ಕ್ಯಾರೆಕ್ಟರ್‌ ಮಾಡಿದ್ದೇನೆ. ಲವರ್‌ಬಾಯ್‌ ಮತ್ತು ಆ್ಯಕ್ಷನ್‌ ಲುಕ್‌ ಎರಡೂ ಥರದ ಶೇಡ್ಸ್‌ ನನ್ನ ಕ್ಯಾರೆಕ್ಟರ್‌ಗಿದೆ. ಮಾಸ್‌ ಮತ್ತು ಕ್ಲಾಸ್‌ ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವಂಥ ಸಬ್ಜೆಕ್ಟ್ ಸಿನಿಮಾದಲ್ಲಿದೆ. ಲವ್‌, ರೊಮ್ಯಾನ್ಸ್‌, ಆ್ಯಕ್ಷನ್‌, ಸಸ್ಪೆನ್ಸ್‌-ಥ್ರಿಲ್ಲರ್‌, ಎಮೋಶನ್ಸ್‌, ಕಾಮಿಡಿ ಎಲ್ಲ ಥರದ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಸಿನಿಮಾ ದಲ್ಲಿದೆ. ಜೊತೆಗೊಂದು ಮೆಸೇಜ್‌ ಕೂಡ ಇದೆ’ ಎನ್ನುತ್ತಾರೆ.

Advertisement

“ಈಗಾಗಲೇ ರಿಲೀಸ್‌ ಅಗಿರುವ “ಸೀತಾಯಣ’ದ ಟೀಸರ್‌, ಸಾಂಗ್ಸ್‌, ಟ್ರೇಲರ್‌ ಎಲ್ಲದಕ್ಕೂ ಆಡಿಯನ್ಸ್‌ ಕಡೆಯಿಂದ, ಇಂಡಸ್ಟ್ರಿ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಇದೇ ರೆಸ್ಪಾನ್ಸ್‌ ಥಿಯೇಟರ್‌ನಲ್ಲಿ ಸಿನಿಮಾಕ್ಕೂ ಸಿಗಲಿದೆ’ ಎಂಬ ವಿಶ್ವಾಸದ ಮಾತು ಅಕ್ಷಿತ್‌ ಅವರದ್ದು.

ಇನ್ನು “ಸೀತಾಯಣ’ ಚಿತ್ರದಲ್ಲಿ ನಾಯಕ ಅಕ್ಷಿತ್‌ ಶಶಿಕುಮಾರ್‌ಗೆ ನಾಯಕಿಯಾಗಿ ಅನಹಿತಾ ಭೂಷಣ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ವಿಕ್ರಂ ಶರ್ಮಾ, ಶರ್ಮಿತಾ ಗೌಡ, ಮಧು ಸೂದನ್‌, ಮೇಘನಾ ಗೌಡ, ಅಜಯ್‌ ಘೋಷ್‌, ಹಿತೇಶ್‌, ವಿಧೆಯುಲೇಖ ರಮನ್‌, ಬಿತ್ರಿಸತ್ತಿ, ಕೃಷ್ಣ ಭಗವಾನ್‌, ಅನಂತ ಬಾಬು, ಗುಂಡು ಸುದರ್ಶನ್‌, ಮಧುಮಣಿ, ಅಪ್ಪರಾವ್‌, ಲೋಬೋ ಮತ್ತಿತರರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರಭಾಕರ್‌ ಆರಿಪ್ಕಾ ನಿರ್ದೇಶನ “ಸೀತಾಯಣ’ ಚಿತ್ರವನ್ನು “ಕಲರ್ ಕ್ಲೌಡ್ಸ್‌ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಲ್ಲಿ ಲಲಿತಾ ರಾಜಲಕ್ಷ್ಮೀ ನಿರ್ಮಿಸಿದ್ದಾರೆ. ಒಟ್ಟಾರೆ ಅಕ್ಷಿತ್‌ ಶಶಿಕುಮಾರ್‌ ಚೊಚ್ಚಲ ಚಿತ್ರ “ಸೀತಾಯಣ’ ಹೇಗಿರಲಿದೆ ಎಂಬುದು ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ.

ಜಿ.ಎಸ್.ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next