Advertisement

Ajjawara ಆಸ್ತಿ ವಿವಾದ: ಅಣ್ಣನಿಂದ ತಮ್ಮನಿಗೆ ಕತ್ತಿಯೇಟು

10:38 PM Oct 01, 2023 | Team Udayavani |

ಅರಂತೋಡು : ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ಕುಂಚಡ್ಕ ಎಂಬಲ್ಲಿ ಆಸ್ತಿ ವಿಚಾರದಲ್ಲಿ ಅಣ್ಣ ಮತ್ತು ತಮ್ಮನ ಮಧ್ಯೆ ಮಾತಿಗೆ ಮಾತು ಬೆಳೆದು ಅಣ್ಣ ತಮ್ಮನಿಗೆ ಕತ್ತಿಯಿಂದ ಕಡಿದಿರುವುದಾಗಿ ತಿಳಿದು ಬಂದಿದೆ.

Advertisement

ಕತ್ತಿಯೇಟಿನಿಂದ ಗಾಯಗೊಂಡಿರುವ ರವಿಚಂದ್ರ ಎಂಬವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತೆರಳಿರುವುದಾಗಿ ತಿಳಿದುಬಂದಿದೆ.

ಅ.1 ರಂದು ಆಸ್ತಿ ವಿಚಾರವಾಗಿ ಸಹೋದರೊಳಗೆ ಮಾತು ಬೆಳೆಯಿತೆಂದೂ ಈ ವೇಳೆ ಅಣ್ಣ ಲವ ಕುಮಾರ್‌ ಎಂಬವರು ತಮ್ಮ ರವಿಚಂದ್ರ ಮೇಲೆ ಕತ್ತಿ ಬೀಸಿದರೆಂದು ಇದರಿಂದ ಗಾಯಗೊಂಡ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದರು. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next