Advertisement

ಒತ್ತಿನೆಣೆಯಲ್ಲಿ ಸಾಕಾರಗೊಳ್ಳಲಿದೆಯೇ ವಿಮಾನ ನಿಲ್ದಾಣ ಯೋಜನೆ?

06:00 AM Sep 28, 2018 | |

ಬೈಂದೂರು: ಹೊಸ ತಾಲೂಕು ಕೇಂದ್ರವಾಗಿ ಘೋಷಣೆಯಾದ ಬೈಂದೂರಿನಲ್ಲಿ ಅಗತ್ಯ ಕಚೇರಿಗಳು ಒಂದೊಂದಾಗಿ ಆರಂಭವಾಗಬೇಕಿದೆ. ಇದರ ನಡುವೆ ಮಹತ್ವಾಕಾಂಕ್ಷಿ ಒತ್ತಿನೆಣೆ ವಿಮಾನ ನಿಲ್ದಾಣದ ಕನಸೂ ಸಾಕಾರಗೊಳ್ಳಲು ವೇದಿಕೆ ಒದಗಬೇಕಿದೆ.  

Advertisement

ಬಹುಬೇಡಿಕೆಯ ಕನಸು 
ಒತ್ತಿನೆಣೆ  ವಿಮಾನ ನಿಲ್ದಾಣದ ಕನಸು ಇಂದು ನಿನ್ನೆಯದಲ್ಲ. ಹಲವು ವರ್ಷಗಳ ಪ್ರಯತ್ನದ ನಡುವೆ 2004ರಲ್ಲಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ಟ್ರಸ್ಟ್‌  ಹಾಗೂ ಮುರ್ಡೆàಶ್ವರ ಆರ್‌.ಎನ್‌.ಶೆಟ್ಟಿ ಟ್ರಸ್ಟ್‌ ಸಹಯೋಗದಲ್ಲಿ ಏರ್‌ಸ್ಟ್ರಿಪ್‌ ಪ್ರಾರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಪ್ರವಾಸಿ ಸ್ಥಳಗಳನ್ನು ಹೊಂದಿರುವ ಹೆಗ್ಗಳಿಕೆಯ ಬೈಂದೂರಿಗೆ ಪ್ರವಾಸಿಗರ ಆಗಮನವೂ ಹೆಚ್ಚಿದೆ. ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಲ್ಲೂರು ಇದರ ಪಕ್ಕದಲ್ಲೇ ಇದ್ದು, ಮುಡೇìಶ್ವರವೂ ಬೈಂದೂರಿನಿಂದ ಕೆಲವೇ ಕಿ.ಮೀ ಅಂತರದಲ್ಲಿದೆ.

ಮಂಗಳೂರೇ ಗತಿ!
ಗೋವಾವನ್ನು ಹೊರತುಪಡಿಸಿದರೆ ಇಲ್ಲಿನ ಪ್ರವಾಸಿಗರು 150 ಕಿ.ಮೀ. ದೂರದ ಮಂಗಳೂರು ವಿಮಾನ ನಿಲ್ದಾಣವನ್ನೇ ಅವಲಂಬಿಸಬೇಕಾಗಿದೆ. ಕೇಂದ್ರ ಸರಕಾರ ಈಗಾಗಲೇ ವ್ಯಾಪಾರ ವಹಿವಾಟು ಮತ್ತು ಪ್ರವಾಸೋದ್ಯಮ ಅಭಿವೃದ್ದಿಗಾಗಿ ಕಿರು ವಿಮಾನ ನಿಲ್ದಾಣ ಸ್ಥಾಪನೆಗೆ ವಿಶೇಷ ಆಸಕ್ತಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ  ಜಿಲ್ಲಾಡಳಿತದ ವತಿಯಿಂದ ವಿಮಾನ ನಿಲ್ದಾಣದ ಜಾಗದ ಕುರಿತು ಸರ್ವೇ ಕಾರ್ಯ ಕೂಡ ನಡೆದಿದೆ. ಸದ್ಯ ಭಟ್ಕಳದಿಂದ ಹೆಚ್ಚಿನ ಪ್ರಯಾಣಿಕರು ವಿದೇಶ ಪ್ರಯಾಣಕ್ಕಾಗಿ ಮಂಗಳೂರನ್ನೇ ಅವಲಂಬಿಸಬೇಕಾಗಿದೆ. ಆದರೆ ಇದಕ್ಕಾಗಿ ಮೂರು ತಾಸಿಗೂ ಹೆಚ್ಚು ರಸ್ತೆ ಪ್ರಯಾಣ ಮಾಡಬೇಕಿದೆ. ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ಆರಂಭಗೊಂಡರೆ ಈ ಭಾಗದವರಿಗೆ, ಶಿವಮೊಗ್ಗ ಭಾಗದವರಿಗೂ ಉಪಯೋಗವಾಗಲಿದೆ.  

ಸರಕಾರದ ಗಮನ ಸೆಳೆಯುವ ಪ್ರಯತ್ನ 
ಬೈಂದೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಬಗಗೆ ದುಬೈನಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ದುಬೈ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿತ್ತು. ಇದರೊಂದಿಗೆ ಸ್ಥಳೀಯ ಜನಪ್ರತಿನಿಧಿಗಳಿರುವ ನಿಯೋಗವೊಂದು ಕೇಂದ್ರದ ಸಚಿವರನ್ನು ಭೇಟಿ ಮಾಡುವ ಚಿಂತನೆ ಇದೆ. ಈಗಾಗಲೇ ವಿಮಾನ ನಿಲ್ದಾಣ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಒತ್ತಾಯಕ್ಕೆ ಯೋಜಿಸಿದೆ.

ಬೈಂದೂರು ವಿಮಾನ ನಿಲ್ದಾಣ ನನ್ನ ದೊಡ್ಡ ಕನಸು. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಾದರೆ ಸಂಪರ್ಕ ವ್ಯವಸ್ಥೆಯೂ ಪ್ರಗತಿಯಾಗಬೇಕು. ಬೈಂದೂರಿನಲ್ಲಿ ವಿಮಾನ ನಿಲ್ದಾಣ ಕುರಿತು ಮುಂದಿನ ದಿನದಲ್ಲಿ ಪ್ರಧಾನಿಯವರ ಗಮನಕ್ಕೆ ತರುವುದರೊಂದಿಗೆ ರಾಜ್ಯ ಸರಕಾರದ ಸಹಕಾರದೊಂದಿಗೆ ಕೇಂದ್ರ ಸಚಿವರ ಗಮನ ಸೆಳೆಯಲಾಗುವುದು.
– ಬಿ.ಎಂ. ಸುಕುಮಾರ ಶೆಟ್ಟಿ, 
ಶಾಸಕರು ಬೈಂದೂರು ಕ್ಷೇತ್ರ

Advertisement

ಕಿರು ವಿಮಾನ ನಿಲ್ದಾಣದ ಪ್ರಸ್ತಾವನೆ ಈಗಾಗಲೇ ಸರಕಾರದ ಮಟ್ಟದಲ್ಲಿದೆ. ಮುಂದಿನ ದಿನದಲ್ಲಿ ಹೋರಾಟ ಸಮಿತಿ ಮೂಲಕ ಕೇಂದ್ರ ಸರಕಾರದ ಗಮನ ಸೆಳೆದು ವಿಮಾನ ನಿಲ್ದಾಣ ಸ್ಥಾಪನೆಗೆ ಪ್ರಯತ್ನಿಸಲಾಗುವುದು. 
– ಸಾಧನ ದಾಸ್‌, ಅಧ್ಯಕ್ಷರು, ನಮ್ಮ ಕುಂದಾಪ್ರ ಬಳಗ

Advertisement

Udayavani is now on Telegram. Click here to join our channel and stay updated with the latest news.

Next