Advertisement

ಮತ್ತೆ ಶಾಕ್; ಏರ್ ಇಂಡಿಯಾದಿಂದ ಗಾಯಕ್ವಾಡ್ ಟಿಕೆಟ್ ಕ್ಯಾನ್ಸಲ್

05:44 PM Mar 28, 2017 | Team Udayavani |

ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿಗೆ ಶಿವಸೇನೆಯ ಸಂಸದ ರವೀಂದ್ರ ಗಾಯಕ್ವಾಡ್ ಚಪ್ಪಲಿಯಿಂದ ಥಳಿಸಿದ ಪ್ರಕರಣದ ತಿಕ್ಕಾಟ ಇನ್ನೂ ಕೂಡಾ ಮುಂದುವರಿದಿದ್ದು, ಗಾಯಕ್ವಾಡ್ ಮಂಗಳವಾರ ಮುಂಬೈನಿಂದ ದೆಹಲಿಗೆ ಬುಕ್ ಮಾಡಿದ್ದ ಟಿಕೆಟ್ ಅನ್ನು ಏರ್ ಇಂಡಿಯಾ ಮತ್ತೆ ಕ್ಯಾನ್ಸಲ್ ಮಾಡಿದೆ.

Advertisement

ಶಿವಸೇನೆ ಮುಖಂಡ ಗಾಯಕ್ವಾಡ್ ಬುಧವಾರ ಮುಂಬೈನಿಂದ ದೆಹಲಿಗೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಏರ್ ಇಂಡಿಯಾ ಮಂಗಳವಾರ ಟಿಕೆಟ್ ಅನ್ನು ರದ್ದು ಮಾಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಆಸನದ ವಿಚಾರಕ್ಕಾಗಿ ಕಳೆದ ಗುರುವಾರ ಖ್ಯಾತೆ ತೆಗೆದಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾದ ಮ್ಯಾನೇಜರ್ ಗೆ ಚಪ್ಪಲಿಯಿಂದ ಥಳಿಸಿದ್ದರು. ಈ ಘಟನೆ ಬಳಿಕ ಭಾರತೀಯ ವಿಮಾನ ಯಾನ ಒಕ್ಕೂಟ ಗಾಯಕ್ವಾಡ್ ವಿಮಾನಯಾನ ಸಂಚಾರಕ್ಕೆ ನಿಷೇಧ ಹೇರಿತ್ತು. ಆದರೆ ಶಿವಸೇನೆ ಪಕ್ಷ ಸಂಸದನ ಕೃತ್ಯವನ್ನು ಬೆಂಬಲಿಸಿತ್ತು. ಅಲ್ಲದೇ ಲೋಕಸಭೆಯಲ್ಲೂ ಸಂಸದನ ಪರವಾಗಿ ಸಮರ್ಥಿಸಿಕೊಂಡು ವಿಮಾನ ಯಾನ ಸಂಸ್ಥೆಯ ವಿರುದ್ದವೇ ಹಕ್ಕುಚ್ಯುತಿ ಮಂಡಿಸಿ ಕ್ಷಮೆಯಾಚಿಸುವಂತೆ ಆಗ್ರಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next