Advertisement

ಮದುವೆಯಾಗಲು ಒತ್ತಾಯಿಸಿದ ಪ್ರೇಯಸಿಯನ್ನು ಕೊಂದು ಶವ ಬಿಸಾಕಿದ!

09:40 AM Jun 01, 2021 | Team Udayavani |

ಮುಂಬೈ: ಆದಷ್ಟು ಬೇಗ ಮದುವೆಯಾಗು ಎಂದು ಒತ್ತಾಯ ಮಾಡುತ್ತಿದ್ದ ಪ್ರೇಯಸಿಯ ಕಿರಿಕಿರಿ ತಾಳಲಾರದೆ ವ್ಯಕ್ತಿಯೋರ್ವ ಆಕೆಯನ್ನು ಕೊಲೆ ಮಾಡಿದ ಘಟನೆ ನವೀ ಮುಂಬೈನಲ್ಲಿ ನಡೆದಿದೆ.

Advertisement

ಮೇ.29ರಂದು ಪನ್ವೇಲ್ ನಲ್ಲಿ ಯುವತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಿ, ತನಿಖೆ ಆರಂಭಿಸಿದ್ದರು. ಆದರೆ ಯಾವುದೇ ಐಡಿ ಅಥವಾ ಡಾಕ್ಯುಮೆಂಟ್ ಇಲ್ಲದ ಕಾರಣ ಮೃತದೇಹವನ್ನು ಗುರುತಿಸಲು ಕಷ್ಟವಾಗಿತ್ತು.

ರವಿವಾರ, ಸ್ಥಳೀಯ ಆಟೋ ಚಾಲಕರೊಬ್ಬರು ತನಗೆ ದಾರಿಯಲ್ಲಿ ಸಿಕ್ಕ, ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕಟ್ಟಿದ್ದ ಪರ್ಸ್, ಆಧಾರ್ ಕಾರ್ಡ್ ಮತ್ತು ಮಹಿಳೆಯ ಬಟ್ಟೆಯ ಕಟ್ಟನ್ನು ಪೊಲೀಸರಿಗೆ ತಂದೊಪ್ಪಿಸಿದ್ದರು. ಅದೇ ದಿನ ಸಾವನ್ನಪ್ಪಿದ ಯುವತಿಯ ಸೋದರನು ಮೃತದೇಹವನ್ನು ಗುರುತಿಸಿದ್ದ.

ಇದನ್ನೂ ಓದಿ:ಸಿನಿಮಾ ಅವಕಾಶ ಹೆಸರಲ್ಲಿ ಸತತ ಅತ್ಯಾಚಾರ: ಬಾಲಿವುಡ್ ನ 9 ಮಂದಿಯ ವಿರುದ್ಧ ಮಾಡೆಲ್ ದೂರು

ಯುವತಿಯ ಸಹೋದರನನ್ನು ವಿಚಾರಣೆ ಮಾಡಿದಾಗ, ತಂಗಿಗೆ ಪನ್ವೇಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಚಂದ್ರಕಾಂತ್  ಗಾಯ್ಕರ್ ಎಂಬಾತನ ಜೊತೆ ಪ್ರೇಮ ಸಂಬಂಧವಿದ್ದು, ಮೊಬೈಲ್ ಫೋನ್ ಸಂಭಾಷಣೆಯಲ್ಲಿ ಅವರಿಬ್ಬರು ಗಲಾಟೆ ಮಾಡುತ್ತಿದ್ದನ್ನು ತಾನು ಕೇಳಿದ್ದೇನೆ ಎಂದಿದ್ದ.

Advertisement

ಪೊಲೀಸರು ಚಂದ್ರಕಾಂತ್ ನನ್ನು ಕೂಡಲೇ ಕರೆಸಿ ವಿಚಾರಣೆ ನಡೆಸಿದ್ದಾರೆ. ತಾನು ಕೃತ್ಯ ನಡೆಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಯುವತಿಯನ್ನು ಕಳೆದ ಆರು ತಿಂಗಳಿನಿಂದ ಪ್ರೀತಿಸುತ್ತಿದ್ದು, ವಿವಾಹವಾಗಲು ಪೀಡಿಸುತ್ತಿದ್ದಳು. ಇದರಿಂದ ಬೇಸತ್ತ ಚಂದ್ರಕಾಂತ್ ಆಕೆಗೆ ಕೆಟಮೈನ್ ಇಂಜೆಕ್ಷನ್ ನೀಡಿ ಆಕೆಯನ್ನು ಕೊಲೆ ಮಾಡಿದ್ದಾನೆ

Advertisement

Udayavani is now on Telegram. Click here to join our channel and stay updated with the latest news.

Next