Advertisement

Aikala: ಕಂಬಳದ ಬಳಿ ನಿಲ್ಲಿಸಿದ್ದ ಆಟೋರಿಕ್ಷಾದಿಂದ ನಗದು ಕಳವು

09:57 PM Feb 06, 2024 | Team Udayavani |

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಐಕಳ ಕಾಂತಾಬಾರೆ ಬೂದಾಬಾರೆ ಕಂಬಳದ ಹೊರವಲಯದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿಟ್ಟಿದ್ದ ನಗದನ್ನು ದುಷ್ಕರ್ಮಿಗಳು ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಕಂಬಳ ವೀಕ್ಷಿಸಲು ಬಂದಿದ್ದ ಐಕಳ ನೆಲ್ಲಿಗುಡ್ಡೆ ನಿವಾಸಿ ಆಲ್ವಿನ್‌ ರೊಡ್ರಿಗಸ್‌ ಬಾಡಿಗೆ ಆಟೋರಿಕ್ಷಾ ನಿಲ್ಲಿಸಿ ಕಂಬಳವೀಕ್ಷಣೆಗೆ ತೆರಳಿದ್ದರು. ವಾಪಸ್‌ ಬಂದು ನೋಡಿದಾಗ ರಿಕ್ಷಾದ ಡ್ಯಾಶ್‌ ಬೋರ್ಡ್‌ನಲ್ಲಿ ಇಟ್ಟಿದ್ದ 9 ಸಾವಿರ ರೂ. ನಗದನ್ನು ಕಳವು ಮಾಡಿರುವುದು ಗೊತ್ತಾಗಿದೆ. ಆಟೋದಲ್ಲಿದ್ದ ವಸ್ತುಗಳನ್ನು ಜಾಲಾಡಿದ್ದು ಸ್ಥಳದಲ್ಲಿ ಆಧಾರ್‌ ಕಾರ್ಡ್‌ ದೊರೆತಿದೆ ಎಂದು ಆಲ್ವಿನ್‌ ರೊಡ್ರಿಗಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next