Advertisement

ಜೆಡಿಎಸ್‌ಗೆ ಎಐಎಂಐಎಂ ಬೆಂಬಲ: ಒವೈಸಿ ಘೋಷಣೆ

06:15 AM Apr 17, 2018 | Team Udayavani |

ಹೈದರಾಬಾದ್‌: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವುದಾಗಿ ಆಲ್‌ ಇಂಡಿಯಾ ಮಜಿÉಸ್‌-ಇ-ಇತ್ತೆಹಾದುಲ್‌ ಮುಸ್ಲಿಮೀನ್‌(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಸೋಮವಾರ ಘೋಷಿಸಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದ ಒವೈಸಿ, ಈಗ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ, ಜೆಡಿಎಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. 

Advertisement

ಕರ್ನಾಟಕದಲ್ಲಿ ಜೆಡಿಎಸ್‌ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವಂತಾಗಬೇಕು, ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಕರ್ನಾಟಕದ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫ‌ಲವಾಗಿವೆ. ಹೀಗಾಗಿ, ನಾವು ಜೆಡಿಎಸ್‌ ಬೆಂಬಲಿಸುತ್ತೇವೆ ಎಂದು ಒವೈಸಿ ಹೇಳಿದ್ದಾರೆ. ಈ ಕುರಿತು ನಾನು ಈಗಾಗಲೇ ಕುಮಾರಸ್ವಾಮಿ  ಜತೆ ಚರ್ಚಿಸಿದ್ದೇನೆ. ನಾನೂ ಸೇರಿದಂತೆ ಪಕ್ಷದ ಸದಸ್ಯರು ಸಾರ್ವಜನಿಕ ಸಭೆ ನಡೆಸಿ ಜೆಡಿಎಸ್‌ ಪರ ಪ್ರಚಾರ ಕೈಗೊಳ್ಳುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ಓವೈಸಿ ಜತೆ ನನಗೆ ಆತ್ಮೀಯತೆ ಇದೆ. ಕುಮಾರಸ್ವಾಮಿ ಆಡಳಿತ ನಡೆಸಿದಾಗ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಟ್ಟಿದ್ದನ್ನು ಗಮನಿಸಿ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದು, ಪ್ರಚಾರಕ್ಕೆ ಬರುವುದಾಗಿಯೂ ಹೇಳಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ಓವೈಸಿ ಬೆಂಬಲದಿಂದ ಪಕ್ಷಕ್ಕೆ ಶಕ್ತಿ ಬಂದಿದೆ.
– ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

Advertisement

Udayavani is now on Telegram. Click here to join our channel and stay updated with the latest news.

Next