Advertisement

ಪಟೇಲ್ ಮೀಸಲಾತಿ, ಕೈ ಗೆ ನ.3 ಅಂತಿಮ ಗಡುವು; ರಾಹುಲ್ ಗೆ ಹಾರ್ದಿಕ್

06:04 PM Oct 28, 2017 | Sharanya Alva |

ಅಹಮದಾಬಾದ್:ಪಾಟಿದಾರ್ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ನವೆಂಬರ್ 3ರೊಳಗೆ ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅನುಭವಿಸಿದ ಪರಿಸ್ಥಿತಿಯನ್ನೇ ಎದುರಿಸಬೇಕಾಗುತ್ತದೆ ಎಂದು ಪಟೇಲ್ ಮೀಸಲಾತಿ ಹೋರಾಟಗಾರರ ಮುಖಂಡ ಹಾರ್ದಿಕ್ ಪಟೇಲ್ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅಗ್ನಿಪರೀಕ್ಷೆಗೆ ಒಡ್ಡಿದ್ದಾರೆ.

Advertisement

ಒಂದು ವೇಳೆ ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ನ.3ರೊಳಗೆ ಸ್ಪಷ್ಟಪಡಿಸದೇ ಇದ್ದರೆ ಸೂರತ್ ರಾಲಿಯಲ್ಲಿ ಅಮಿತ್ ಶಾ ಅನುಭವಿಸಿದ ಪರಿಸ್ಥಿತಿಯನ್ನೇ ಅನುಭವಿಸಬೇಕಾಗುತ್ತದೆ ಎಂದು ಹಾರ್ದಿಕ್ ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು ಸೂರತ್ ನಲ್ಲಿ ಪಾಟಿದಾರ್ ಸಮುದಾಯದ ಮುಖಂಡರ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತುಕತೆ ನಡೆಸಲು ಮುಂದಾದ ವೇಳೆ ಹಾರ್ದಿಕ್ ಪಟೇಲ್ ಬೆಂಬಲಿಗರು ಘೋಷಣೆ ಕೂಗಿ ಗದ್ದಲ ಎಬ್ಬಿಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು.

ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸುವಂತೆ ಆಹ್ವಾನ ನೀಡಿರುವ ಕಾಂಗ್ರೆಸ್ಗೆ ಪಟೇಲ್ ಮೀಸಲಾತಿ ಹೋರಾಟಗಾರರ ಮುಖಂಡ ಹಾರ್ದಿಕ್ ಪಟೇಲ್ ಈಗಾಗಲೇ ಹಲವು ಷರತ್ತುಗಳನ್ನು ವಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next