Advertisement

ಕೃಷಿ ಸಿರಿಯ ಕೊಂಡಾಡಿದಡಾ|ಡಿ.ವೀರೇಂದ್ರ ಹೆಗ್ಗಡೆ

09:47 AM Dec 04, 2017 | Team Udayavani |

ವಿದ್ಯಾಗಿರಿ: ಆಳ್ವಾಸ್‌ ನುಡಿಸಿರಿಯಲ್ಲಿ ಪಾಲ್ಗೊಳ್ಳಲು ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ವಿದ್ಯಾಗಿರಿಗೆ ಆಗಮಿಸಿದರು. ಸಾಹಿತ್ಯ ಸಮ್ಮೇಳನ ವೇದಿಕೆಗೆ  ಹೋಗುವುದಕ್ಕೂ ಮೊದಲು ನೇರವಾಗಿ ಕೃಷಿ ಸಿರಿಗೆ ಭೇಟಿ ನೀಡಿದರು.

Advertisement

ಅಲ್ಲಿನ ಫಲ ಪುಷ್ಪ ಹಾಗೂ ವಿವಿಧ ತಳಿಯ ತರಕಾರಿ/ ಹಣ್ಣಿನ ಬೀಜಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಭತ್ತದಿಂದ ಮಾಡಿದ ವಿಶೇಷ ಉತ್ಪನ್ನವೊಂದನ್ನು ಡಾ| ಹೆಗ್ಗಡೆ ಅವರಿಗೆ ಕೃಷಿಕರೊಬ್ಬರು ಪ್ರದಾನಿಸಿದರು. “ನಮ್ಮ ಅನ್ನದಾತರು ನೀವು’ ಎಂದು ಕೃಷಿಕರೊಬ್ಬರು ಡಾ| ಹೆಗ್ಗಡೆ ಅವರನ್ನು ಉಲ್ಲೇಖೀಸಿದರು. ಆ ಬಳಿಕ ತರಕಾರಿ ತೋಟ ವನ್ನು ವೀಕ್ಷಿಸಿದ ಹೆಗ್ಗಡೆ ಅವರು, ಡಾ| ಮೋಹನ್‌ ಆಳ್ವ ಅವರ ಕಾರ್ಯಕ್ಷಮ  ತೆಯನ್ನು ಶ್ಲಾಘಿಸಿ, ನುಡಿಸಿರಿಗೆ ಕೃಷಿಸಿರಿಯ ಮೂಲಕ ಪರಿಪೂರ್ಣತೆ ದೊರೆಯಿತು ಎಂದು ಉದ್ಗರಿಸಿದರು. ಬಳಿಕ ಕೃಷಿಸಿರಿ ನಡೆಯುವಲ್ಲಿ ಸಿದ್ಧ ಪಡಿಸಲಾದ ಭೋಜನ ವ್ಯವಸ್ಥೆಯನ್ನು ವೀಕ್ಷಿಸಿದರು. ನುಡಿ 
ಸಿರಿಯ ಮುಖ್ಯವೇದಿಕೆಯ ಹತ್ತಿರದಲ್ಲಿ ಪುಸ್ತಕ ಮೇಳ, ಗಾಳಿಪಟ ವೀಕ್ಷಿಸಿದರು. 

ಡಾ| ಎಂ. ಮೋಹನ್‌ ಆಳ್ವ, ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next