Advertisement

ಕೃಷಿ ವಿವಿ ಯ 34ನೇ ಘಟಿಕೋತ್ಸವ : ರಾಜ್ಯಪಾಲ ಗೆಹ್ಲೋಟರಿಂದ ಚಾಲನೆ

11:31 AM Oct 18, 2021 | Team Udayavani |

ಧಾರವಾಡ: ಇಲ್ಲಿನ ಪ್ರತಿಷ್ಠಿತ ಧಾರವಾಡ ಕೃಷಿ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಾದ ತಾವರಚಂದ ಗೇಹ್ಲೊಟ್ ಅವರು ಚಾಲನೆ ನೀಡಿದರು.

Advertisement

ಒಟ್ಟು 63 ಜನರು ಪಿಎಚ್ ಡಿ, 911ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಒಟ್ಟು 53 ಚಿನ್ನದ ಪದಕಗಳನ್ನು 9 ವಿದ್ಯಾರ್ಥಿಗಳು ಪಡೆದುಕೊಂಡರು.

ಅತೀ ಹೆಚ್ಚು ಅಂಕಗಳನ್ನು (9.3) ಪಡೆದುಕೊಂಡು ಪೂಜಾ ವಿಜಯ ಕುಲಕರ್ಣಿ ಕೃಷಿ ವಿವಿಗೆ ಅತೀ ಹೆಚ್ಚು ಚಿನ್ನದ ಪದಕ ಪಡೆದುಕೊಂಡರು. ಆದರೆ ಅವರು ಗುಜರಾತ್ ನ ಅಹಮದಾಬಾದ ನಲ್ಲಿ ಎಂಬಿಎ ಮಾಡುತ್ತಿರುವ ಹಿನ್ನೆಲೆಯಲ್ಲಿ ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದರು.

ಇದನ್ನೂ ಓದಿ:ಭಾರೀ ಮಳೆಗೆ ಹೊಳೆಯಲ್ಲಿ ಕೊಚ್ಚಿಹೋಯ್ತು ಮನೆ; ವಿಡಿಯೋ ವೈರಲ್

ಸೆಲ್ಕೋ ಸೋಲಾರ ಸಂಸ್ಥೆ ಮುಖ್ಯಸ್ಥ ಡಾ.ಹರೀಶ ಹಂದೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next