Advertisement

ತನ್ನ ಟೈಟಲ್‌, ಪೋಸ್ಟರ್‌ ಮತ್ತು ಟೀಸರ್‌ಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ಹೊಸ ಪ್ರತಿಭೆಗಳ “ಅಘೋರ’ ಚಿತ್ರ ಇಂದು ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ. “ಮೋಕ್ಷ ಸಿನಿಮಾಸ್‌’ ಬ್ಯಾನರ್‌ನಲ್ಲಿ ಪುನೀತ್‌ ಗೌಡ ನಿರ್ಮಿಸಿರುವ “ಅಘೋರ’ ಚಿತ್ರಕ್ಕೆ ಎನ್‌. ಎಸ್‌ ಪ್ರಮೋದ್‌ ರಾಜ್‌ ನಿರ್ದೇಶನವಿದೆ.

Advertisement

“ಅಘೋರ’ ಚಿತ್ರದಲ್ಲಿ ಪುನೀತ್‌, ಅಶೋಕ್‌, ದ್ರವ್ಯಾ ಶೆಟ್ಟಿ, ರಚನಾ ದಶರಥ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಹಿರಿಯ ನಟ ಅವಿನಾಶ್‌ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಅಘೋರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಘೋರಿ ಪಾತ್ರ ನೋಡಿದಷ್ಟು ಸುಲಭವಾಗಿ ಮಾಡುವಂಥದ್ದಲ್ಲ. ಅಘೋರಿಗಳಿಗೆ ಅವರದ್ದೇ ಆದ ಹಾವ-ಭಾವವಿ ರುತ್ತದೆ. ಅದನ್ನೆಲ್ಲ ಅನುಸರಿಸಿ, ತೆರೆಮೇಲೆ ನಟಿಸಬೇಕು. ಇಂತಹ ಪಾತ್ರಕ್ಕೆ ಅವಿನಾಶ್‌ ಅವರೇ ಸೂಕ್ತ ಎಂಬ ಕಾರಣಕ್ಕೆ ಚಿತ್ರತಂಡ ಅವರಿಂದಲೇ ಅಘೋರಿ ಪಾತ್ರ ಮಾಡಿಸಿದೆ.

“ಈ ಪಾತ್ರಕ್ಕೆ ಪರಿಪೂರ್ಣ ನ್ಯಾಯ ಕೊಡಲು ಅವಿನಾಶ್‌ ಅವರಿಂದ ಮಾತ್ರ ಸಾಧ್ಯ ಎಂಬುದು ನಮ್ಮ ನಂಬಿಕೆಯಾಗಿತ್ತು. ನಮ್ಮ ಕಥೆಯನ್ನು ಕೇಳಿದ ಅವಿನಾಶ್‌ ಈ ಪಾತ್ರವನ್ನು ಮಾಡಲು ಮನಪೂರ್ವಕವಾಗಿ ಒಪ್ಪಿಕೊಂಡರು. ಮೇಲ್ನೊ ಟಕ್ಕೆ

ಇದೊಂದು ಹಾರರ್‌ ಸಿನಿಮಾದಂತೆ ಕಂಡರೂ, ಪ್ರಕೃತಿಯನ್ನು ಕೇ.ದ್ರವಾಗಿಟ್ಟುಕೊಂಡು ಮಾಡಿದಂಥ ಸಿನಿಮಾ ಇದು. ಪ್ರತಿಯೊಂದು ಪಾತ್ರವೂ ಪ್ರಕೃತಿಯ ಒಂದೊಂದು ಅಂಶಗಳನ್ನು ಪ್ರತಿನಿಧಿಸುತ್ತದೆ. ನಾವು ಪ್ರಕೃತಿ ಜೊತೆ ಹೇಗೆ ಬದುಕಬೇಕು. ಪ್ರಕೃತಿ ನಮಗೇಕೆ ಮುಖ್ಯ ಅನ್ನುವುದನ್ನು ಒಂದೊಂದು ಪಾತ್ರದ ಮೂಲಕ ವಿವರಿಸಿದ್ದೇವೆ. ಸಾವು ಯಾಕೆ ಅನಿ ವಾರ್ಯ. ಅದು ಯಾಕೆ ನಿಗೂಢವಾಗಿದೆ ಎಂಬು ದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಇದು ಸೈನ್ಸ್‌ ಅಂಡ್‌ ಡೆತ್‌ ಕಲ್ಪನೆಯಲ್ಲಿ ಮಾಡಿದ ಸಿನಿಮಾ’ ಎನ್ನುವುದು ನಿರ್ದೇಶಕ ಪ್ರಮೋದ್‌ ರಾಜ್‌ ಮಾತು.

Advertisement
Advertisement

Udayavani is now on Telegram. Click here to join our channel and stay updated with the latest news.

Next