Advertisement

ಮತ್ತೆ ಹುಲಿರಾಯ ಪ್ರತ್ಯಕ್ಷ

11:34 AM Oct 27, 2018 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕೆ.ಜೆ.ಹಬ್ಬನಕುಪ್ಪೆ ಸುತ್ತಮುತ್ತಲ ಗ್ರಾಮಗಳಲ್ಲಿ ರಾಸುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿ ಮತ್ತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. 

Advertisement

ತಾಲೂಕಿನ ಕೆ.ಜೆ.ಹಬ್ಬನಕುಪ್ಪೆಯ ತರಗನ್‌ ಎಸ್ಟೇಟ್‌ನಲ್ಲಿ ಮೂರು ಮರಿಗಳೊಂದಿಗೆ ಠಿಕಾಣಿ ಹೂಡಿದ್ದ ಹೆಣ್ಣು ಹುಲಿ ಎಸ್ಟೇಟ್‌ ಮಾಲಿಕರು ಹಾಗೂ ಸುತ್ತಮುತ್ತಲಿನವರು ಮೇಯಲು ಬಿಟ್ಟಿದ್ದ ಹಸು-ಕರು ಹಾಗೂ ಕಾಡು ಹಂದಿಗಳನ್ನು ಕೊಂದು ತಿಂದು ಹಾಕಿತ್ತು.

ಗ್ರಾಮಸ್ಥರ ಮನವಿ ಮೇರೆಗೆ ಹುಲಿ ಪತ್ತೆಗೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಸಾಕಾನೆಗಳ ಸಹಾಯದಿಂದ ಕೂಂಬಿಂಗ್‌, ಡ್ರೋಣ್‌ ಮೂಲಕವೂ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಸಿಸಿ ಕ್ಯಾಮರಾಕ್ಕೆ ಹುಲಿ ಹಾಗೂ ಮೂರು ಮರಿಗಳು ಕಾಣಿಸಿಕೊಂಡಿತ್ತು. ಆದರೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿ ನಂತರದಲ್ಲಿ ಜಾಗ ಬದಲಾಯಿಸಿತ್ತು. ಬೋನಿಟ್ಟು ಸೆರೆಗೆ ಯತ್ನಿಸಿದ್ದರೂ ಪ್ರಯೋಜನವಾಗಲಿಲ್ಲ. 

ಇದೀಗ ನೇರಳಕುಪ್ಪೆ ಗ್ರಾಪಂ ಬಿಲ್ಲೇನಹೊಸಹಳ್ಳಿ ಬಳಿಯ ಕಾಡಂಚಿನ ಹೊಸಕೆರೆ ಬಳಿಯಲ್ಲಿ ಬೇಟೆಗಾಗಿ ಅತ್ತಿಂದಿತ್ತ ಹೊಂಚು ಹಾಕುತ್ತಿರುವ ದೊಡ್ಡ ಹುಲಿಯನ್ನು ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್‌ ಮೂಲಕ ವಿಡಿಯೋ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next