Advertisement

ಪಾಕ್ ಹೊಸ ವರಸೆ : ರೈಲು ಆಯ್ತು ಇದೀಗ ಬಸ್ಸು ಸಂಚಾರವೂ ಬಂದ್!

09:09 AM Aug 10, 2019 | Team Udayavani |

ನವದೆಹಲಿ: ಸಂಝೋತಾ ಎಕ್ಸ್ ಪ್ರೆಸ್ ರೈಲು ಹಾಗೂ ಜೋಧ್ ಪುರ ಮತ್ತು ಕರಾಚಿ ನಡುವೆ ಸಂಪರ್ಕ ಸೇವೆ ಕಲ್ಪಿಸುತ್ತಿದ್ದ ಥಾರ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಿದ ಬಳಿಕ ಪಾಕಿಸ್ಥಾನ ಇದೀಗ ದೆಹಲಿ ಮತ್ತು ಲಾಹೋರ್ ನಡುವೆ ಸಂಚರಿಸುತ್ತಿದ್ದ ಬಸ್ ಸೇವೆಯನ್ನೂ ಸಹ ರದ್ದುಗೊಳಿಸಿದೆ.

Advertisement

ಪಾಕಿಸ್ಥಾನದ ಸಾರಿಗೆ ಒಕ್ಕೂಟ ಸಚಿವ ಮುರಾದ್ ಸಯೀದ್ ಅವರು ದ್ವಿರಾಷ್ಟ್ರಗಳ ನಡುವಿನ ಬಸ್ಸು ಸಂಚಾರವನ್ನು ರದ್ದುಗೊಳಿಸಳಾಗಿದೆ ಎಂದು ಪ್ರಕಟಿಸಿದ್ದಾರೆ.

ಲಾಹೋರ್ ಮತ್ತು ನವದೆಹಲಿ ನಡುವೆ ಓಡಾಟ ನಡೆಸುತ್ತಿದ್ದ ಸಂಝೋತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಿ ಪಾಕಿಸ್ಥಾನದ ರೈಲ್ವೇ ಸಚಿವ ಶೇಖ್ ರಶೀದ್ ಅವರು ಗುರುವಾರದಂದು ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next