Advertisement

ಬಿಜೆಪಿ ಜತೆ ಮೈತ್ರಿ ಹೊರತು ಬೇರೆ ಆಯ್ಕೆ ಇರಲಿಲ್ಲ; ನಿತೀಶ್ ಕುಮಾರ್

04:35 PM Jul 31, 2017 | Team Udayavani |

ಪಾಟ್ನಾ:ಭಾರತೀಯ ಜನತಾ ಪಕ್ಷದ ಜತೆ ಮೈತ್ರಿ ಹೊರತು ಬೇರೆ ಆಯ್ಕೆಯೇ ಇರಲಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ತಿಳಿಸಿದ್ದಾರೆ.

Advertisement

ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾಮೈತ್ರಿ ಕೂಟ ಮುಂದುವರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದೆ. ಆದರೆ ಮಹಾಮೈತ್ರಿ ಮುಂದುವರಿಸುವ ಪರಿಸ್ಥಿತಿ ಇರಲಿಲ್ಲ. ಆದರೆ ತಮ್ಮ ಪಕ್ಷದ ಕಾರ್ಯಕರ್ತರು ಯಾವತ್ತೂ ಲಾಲೂಪ್ರಸಾದ್ ಯಾದವ್ ಅವರನ್ನು ಅಗೌರವವಾಗಿ ನಡೆದುಕೊಳ್ಳಲ್ಲ ಎಂದು ಹೇಳಿದರು.

ನಾನು ಎಲ್ಲವನ್ನೂ ಸಹಿಸಿಕೊಂಡೆ, ಕೊನೆಗೆ ನನಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲವಾಗಿತ್ತು. ಹಾಗಾಗಿ ಆರ್ ಜೆಡಿ ತೊರೆದು ಬಿಜೆಪಿ ಕೈಹಿಡಿಯಬೇಕಾಯಿತು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next