Advertisement

ಅಯೋಧ್ಯೆ ಯಾತ್ರಾರ್ಥಿಗಳ ಸಂಖ್ಯೆ ಏರಿಕೆ ನಿರೀಕ್ಷೆ: ಯೋಗಿ ಆದಿತ್ಯನಾಥ್‌

09:21 PM Dec 18, 2022 | Team Udayavani |

ಲಕ್ನೋ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದ ನಂತರ ಅಲ್ಲಿಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ 10 ಪಟ್ಟು ಏರಿಕೆಯಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು.

Advertisement

ಇಂಡಿಯನ್‌ ಅಸೋಸಿಯೇಷನ್‌ ಆಫ್ ಟೂರ್‌ ಆಪರೇಟರ್ಸ್‌ಗಳ 37ನೇ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಈ ಹಿಂದೆ ವರ್ಷಕ್ಕೆ ಒಂದು ಕೋಟಿ ಪ್ರವಾಸಿಗರು ಕಾಶಿಗೆ ಭೇಟಿ ನೀಡುತ್ತಿದ್ದರು.

ವೈಭಯುತ ಕಾಶಿ ಕಾರಿಡಾರ್‌ ನಿರ್ಮಾಣವಾದ ನಂತರ ಶ್ರಾವಣ ಮಾಸ ಒಂದರಲ್ಲೇ ಒಂದು ಕೋಟಿ ಪ್ರವಾಸಿಗರು ಕಾಶಿಗೆ ಭೇಟಿ ನೀಡಿದ್ದಾರೆ,’ ಎಂದರು.

“ರಾಜ್ಯದಲ್ಲಿ ಪ್ರವಾಸೋದ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮಥುರಾ-ಬೃಂದಾವನದಲ್ಲಿ 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿವೆ. ಪ್ರವಾಸಿಗರಿಗೆ ಉತ್ತರ ಪ್ರದೇಶ ಸುರಕ್ಷಿತ ರಾಜ್ಯವಾಗಿದೆ,’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next